ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಿಂದ ರಾಷ್ಟ್ರದ ಬೆಳವಣಿಗೆ ಸಾಧ್ಯ ಎಂದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಲ್ಲಿ ಭಾರತ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರ ಸದ್ಬಳಕೆ ಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಅವರು ಹೇಳಿದರು.ಸೃಜನಾತ್ಮಕವಾಗಿ ಮತ್ತು ಬಹುಶಿಸ್ತೀಯ ರೀತಿಯಲ್ಲಿ ಚಿಂತನೆ ನಡೆಸುವುದು ಅತ್ಯಂತ ಅವಶ್ಯಕ. ಬದಲಾಗುತ್ತಿರುವ ವಿಷಯ ವ್ಯಾಪಿಯಲ್ಲಿ ಹೊಸದನ್ನು ಮೈಗೂಡಿಸಿಕೊಳ್ಳಬೇಕು. ಭಾರತದ ಶಿಕ್ಷಣ ನೀತಿಯು ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಕಲಿಕೆಯ ಜೊತೆಗೆ ಕೌಶಲಗಳ ಅಭಿವೃದ್ದಿಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಾತನಾಡಿ, ಉತ್ತಮ ದಾರಿ ಮತ್ತು ಗುರಿಯೊಂದಿಗೆ ಆತ್ಮವಿಶ್ವಾಸದಿಂದ ನಡೆಯುವಾತ ಯಶಸು ಪಡೆಯಲು ಸಾಧ್ಯ. ನೂರಾರು ಕನಸಗಳನ್ನೊತ್ತ ಯುವ ಸಮೂಹವೇ ಇಲ್ಲಿದೆ. ಮೊದಲು ಸಾಗುವ ದಾರಿಯನ್ನು ನಿಗದಿಪಡಿಸಿಕೊಳ್ಳಿ. ಯಶಸ್ಸು ತಾನಾಗಿಯೇ ಲಭಿಸುವುದು ಎಂದು ಹೇಳಿದರು.
ಜೀವನದ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿ. ಏಕೆಂದರೆ ಬದುಕು ಎನ್ನುವುದು ಪ್ರತಿನಿತ್ಯ ಹೊಸ ಆದ್ಯಾಯಗಳನ್ನೇ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಗೆಲುವು ಮುಖ್ಯ ಅಲ್ಲ. ನಡೆದು ಬಂದ ದಾರಿ ಅತೀ ಮುಖ್ಯ. ಕಾಲೇಜು ಜೀವನದ ಪ್ರತಿ ಘಟನೆಗಳನ್ನು ನೆನಪಿಸುತ್ತದೆ. ಇಲ್ಲಿ ಸಿಗುವಂತಹ ಸೌಕರ್ಯಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
----
ವಿದ್ಯಾರ್ಥಿಗಳ ಜೀವನದ ಅಭಿವೃದ್ದಿಗೆ ಮೈಲಿಗಲ್ಲು. ಇಲ್ಲಿ ಶ್ರದ್ದೆ, ವಿನಯದಿಂದ ಕಲಿತದ್ದು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ. ಶಿಕ್ಷಕರು ಮತ್ತು ತಂದೆ ತಾಯಿಯ ಆಸೆ, ಕನಸುಗಳನ್ನು ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿಗಳಾದ ನಿಮ್ಮ ಕೈಯಲ್ಲಿದೆ.