ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಿರುಗಾವಲು ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿ ಅಧ್ಯಕ್ಷ ನರೇಂದ್ರ ಕೆ.ಎಂ.ಪುಟ್ಟು ಮಾತನಾಡಿ, ನಮ್ಮ ತಂದೆ ಮಾಜಿ ಶಾಸಕ ದಿ.ಕೆ.ಎಂ.ಪುಟ್ಟು ಅವರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಎಲ್ಲರೂ ವಿಶ್ವಾಸದೊಂದಿಗೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರೈತರು ಹಾಗೂ ಸದಸ್ಯರು ಹಲವಾರು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.ಸುಮಾರು 60 ಕೋಟಿ ರು.ವಾಹಿವಾಟಿನ ಮೂಲಕ ಕಳೆದ ಸಾಲಿನಲ್ಲಿ ತಾಲೂಕಿನಲ್ಲಿಯೇ ಪ್ರಥಮ ಸ್ಥಾನದೊಂದಿಗೆ 33 ಲಕ್ಷ ರು. ಲಾಭ ಗಳಿಸಿದೆ. ಅಲ್ಲದೇ, ಆ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚಿನ ಲಾಭಾಂಶ ಎರಡನೇ ಹಾಗೂ ತಾಲೂಕಿನ ಪ್ರಥಮ ಸಹಕಾರ ಸಂಘವಾಗಿದೆ. ಎಲ್ಲ ನಿರ್ದೇಶಕರ ಹಾಗೂ ಸದಸ್ಯರ ಸಲಹೆ ಸೂಚನೆಗಳೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಎಂ.ಚಿಕ್ಕಯ್ಯ, ನಿರ್ದೇಶಕರಾದ ಎಂ.ಎಸ್.ನಿಂಗೇಗೌಡ, ಜಗದೀಶ್, ಮನೋಹರ್, ಆನಂದ್ ಕುಮಾರ್, ಯಶೋಧಮ್ಮ, ಅಲ್ತಾಫ್, ಅಜೀಜ್ ಖಾನ್, ಮಾಲಾಶ್ರೀ, ಜಯಶೀಲಾ, ಬಿ.ಸಿದ್ದರಾಜು, ಸಿಇಓ ಶಿವಲಿಂಗು ಪಾಲ್ಗೊಂಡಿದ್ದರು.
ಮಂಡ್ಯ:
ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ನಗರಸಭೆಗೆ ಸೇರಿದ ಆಸ್ತಿಗಳ ರಕ್ಷಣೆ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.
ಅಲ್ಲದೇ, ನಗರಸಭೆ ವ್ಯಾಪ್ತಿಯಲ್ಲಿ 19 ಸ್ಮಶಾನಗಳಿದ್ದು, ರಾಜ್ಯ ಹಣಕಾಸು ಅನುದಾನ, ಕೇಂದ್ರ ಹಣಕಾಸು ಅನುದಾನ, ಎಸ್.ಎಫ್.ಸಿ. ವಿಶೇಷ ಅನುದಾನ, ನಗರಸಭಾ ನಿಧಿ ಸೇರಿದಂತೆ ಇನ್ನಿತರೆ ಅನುದಾನದಲ್ಲಿ ಸ್ಮಶಾನಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿರುತ್ತವೆ ಎಂದೂ ವಿವರಿಸಿದ್ದಾರೆ.