ಹಾವೇರಿ: ಗ್ರಾಮ ಒನ್ ಹಾಗೂ ಸಿಎಸ್ಸಿ ಆನ್ಲೈನ್ ಸೆಂಟರ್ಗಳಲ್ಲಿ ಪಾಸ್ಪೋರ್ಟ್ ಅಳತೆಯ ಫೋಟೊ ತೆಗೆಯುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ತಾಲೂಕಿನಾದ್ಯಂತ ಗ್ರಾಮ ಒನ್ ಹಾಗೂ ಸಿಎಸ್ಸಿ ಆನ್ಲೈನ್ ಸೆಂಟರ್ಗಳಲ್ಲಿ ಪಾಸ್ಪೋರ್ಟ್ ಸೈಜ್ ಪೋಟೋ ತೆಗೆಯುತ್ತಿರುವುದು ಕಂಡುಬಂದಿದೆ.
ಸವಣೂರು: ನಗರದ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಿಯಲ್ಲಿ ಸತ್ಯಧರ್ಮ ತೀರ್ಥರ ಆರಾಧನಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಶ್ರೀಮಠದಲ್ಲಿ ಇರುವ ಸತ್ಯಧರ್ಮ ತೀರ್ಥರ ಸನ್ನಿಧಿಗೆ ವಿಶೇಷ ಪೂಜೆ, ಪಂಚಾಮೃತ, ರಜತ ರಥೋತ್ಸವ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ ವಿತರಣೆ, ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವಾ, ಭಜನೆ ಹರಿನಾಮ ಸಂಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು.ಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ್ ಆಚಾರ್ಯ ಹಾಗೂ ಅಭಿಷೇಕ್ ಆಚಾರ್ಯ ನೇತೃತ್ವ ವಹಿಸಿದ್ದರು.
ಅರ್ಚಕರಾದ ರಂಗಾಚಾರ ರಾಯಚೂರು, ಪ್ರಮೋದಚಾರ್ಯ ರಾಯಚೂರು, ವಾಸುದೇವಚಾರ್ಯ ಹತ್ತಿಮತ್ತೂರ, ಪ್ರವೀಣ್ ಆಚಾರ್ಯ ಆಯಿ, ಸತ್ಯಪ್ರಮೋದ ರಾಯಚೂರ, ಮನೋಜ ಕುಲಕರ್ಣಿ, ಮೈಲಾರಿ ಕುಲಕರ್ಣಿ, ನಾರಾಯಣ ನಾಮಾವಳಿ, ಸತ್ಯಬೋಧ ಖಾರದ, ಸಂಕೇತ ಕುಲಕರ್ಣಿ, ಮನೋಜ ಕುಲಕರ್ಣಿ, ಸರ್ವಜ್ಞ ಖಾರದ, ವಾದಿರಾಜ ಗಲಗಲಿ ಮುಂತಾದವರು ಪಾಲ್ಗೊಂಡಿದ್ದರು. ರವಿ ಖಾರದ ಆರಾಧನಾ ಮಹೋತ್ಸವವನ್ನು ನಿರ್ವಹಿಸಿದರು.