ಕುಮಟಾ: ಶಿರೂರು ಗುಡ್ಡ ಕುಸಿತದ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಶವವನ್ನು ಹೊರತೆಗೆಯಬೇಕು ಎಂದು ಇಲ್ಲಿನ ಯುವ ನಾಮಧಾರಿ ಸಂಘಟನೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಶುಕ್ರವಾರ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಅವರ ಮೂಲಕ ಸಲ್ಲಿಸಲಾಯಿತು.
ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಶವಗಳನ್ನು ಹೊರತೆಗೆದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸರ್ಕಾರದ ತಕ್ಷಣದ ಕ್ರಮದ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಧ್ಯಕ್ಷ ರಾಜೇಶ ನಾಯ್ಕ, ದಿವಾಕರ ನಾಯ್ಕ, ರಾಜು ನಾಯ್ಕ ಮಾಸ್ತಿಹಳ್ಳ, ಅಣ್ಣಪ್ಪ ನಾಯ್ಕ, ಸಂತೋಷ ನಾಯ್ಕ ದೇವರಹಕ್ಕಲ, ದತ್ತು ನಾಯ್ಕ ಹೆಗಡೆ, ಯೋಗೀಶ ನಾಯ್ಕ, ಸಚಿನ ನಾಯ್ಕ, ಪ್ರಮೋದ ನಾಯ್ಕ, ಸಂದೇಶ ನಾಯ್ಕ, ವೈಭವ ನಾಯ್ಕ ಇತರರು ಇದ್ದರು. ಕರಡಿ ದಾಳಿ: ವೃದ್ಧನಿಗೆ ಗಾಯಜೋಯಿಡಾ: ಜೋಯಿಡಾ ಪಕ್ಕದ ಕಾರವಾರ ತಾಲೂಕಿನ ಲಾಂಡೆ ಗ್ರಾಮದ ವೃದ್ಧನ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿದ್ದು, ಘಟನೆಯಲ್ಲಿ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾನೆ.ಅರ್ಜುನ(60) ಎಂಬವರೇ ಕರಡಿ ದಾಳಿಯಿಂದ ವ್ಯಕ್ತಿ. ಅರ್ಜುನ ಅವರು ಜಮೀನಿಗೆ ತೆರಳುತ್ತಿದ್ದಾಗ ಕರಡಿ ದಾಳಿ ಮಾಡಿದೆ. ವೃದ್ಧನ ಕಣ್ಣು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಕರಡಿ ಪರಚಿ ಗಾಯಗೊಳಿಸಿದೆ. ಕೂಡಲೇ ಸ್ಥಳೀಯರು ಆಗಮಿಸಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದ್ಯೊಯಲಾಗಿದೆ ಎಂದು ತಿಳಿದುಬಂದಿದೆ.