-ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಸುರಪುರ
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ರಾಜಾ ಪಿಡ್ಡನಾಯಕ ಮತ್ತು ರಾಜಾ ಮುಕುಂದ ನಾಯಕ, ಸಿದ್ದನಗೌಡ ಪಾಟೀಲ್ ಕರಿಭಾವಿ ನೇತೃತ್ವದಲ್ಲಿ ನೇಮಿಸಲಾಯಿತು.ನಗರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾಗಿ ಶ್ರೀನಿವಾಸನಾಯಕ ದೊರೆ, ಅಧ್ಯಕ್ಷರಾಗಿ ಭೀಮನಗೌಡ ಹೆಮನೂರು, ಕಾರ್ಯಾಧ್ಯಕ್ಷರಾಗಿ ಹನುಮಗೌಡ ರುಕ್ಮಾಪುರ, ಭೀಮು ಎಚ್. ನಾಯಕ ಮಲ್ಲಿಭಾವಿ, ಉಪಾಧ್ಯಕ್ಷರಾಗಿ ಯಲ್ಲಪ್ಪ ಕಲ್ಲೋಡಿ ಕಬಾಡಗೇರಾ, ಮಲ್ಲನಗೌಡ ಗೋಡಿಹಾಳ, ಸಂಜೀವಪ್ಪ ನಾಯಕ ತಿಂಥಣಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ನಾಯಕ ಪ್ಯಾಪ್ಲಿ, ಸಹ ಕಾರ್ಯದರ್ಶಿಗಳಾಗಿ ಪರಮಣ್ಣ ಕಕ್ಕೇರಿ, ರಂಗನಾಥ ನಾಯಕ, ಸಂಘಟನಾ ಕಾರ್ಯದರ್ಶಿಗಳಾಗಿ ದೇವು, ಮೌನೇಶ, ನಾಗರಾಜ, ಆನಂದ, ವಿಜಯಗೌಡ, ವೆಂಂಕಟೇಶ, ಖಜಾಂಚಿಯಾಗಿ ವಿಜಯಕುಮಾರ ಸೇರಿದಂತೆ ಇನ್ನಿತರರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿದರು.
------
20ವೈಡಿಆರ್2: ಸುರಪುರ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.