ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಸೂಲಿಬೆಲೆ ಹೋಬಳಿ ಸಿದ್ದೇನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ದಿವಂಗತ ಬಿ.ಎನ್. ವೆಂಕಟರಮಣಗೌಡರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿನಿಮಾ, ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲೂ ನಾಟಕ ಕಲೆ ಉಳಿದುಕೊಂಡಿರುವುದು ಗ್ರಾಮೀಣ ಭಾಗದ ಕಲಾವಿದರಿಂದ,ರಂಗಭೂಮಿಯನ್ನು ಯುವ ಸಮುದಾಯದವರು ಪ್ರೋತ್ಸಾಹಿಸಿ, ಉಳಿಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಸತೀಶಗೌಡ ಮಾತನಾಡಿ, ಪ್ರಥಮ ಬಾರಿಗೆ ನಾಟಕ ನಿರ್ದೇಶನ ಮಾಡುತ್ತಿರುವ ಸಿದ್ದೇನಹಳ್ಳಿಯ ರಾಮಾಂಜಿನಪ್ಪ ಅವರ ಪ್ರತಿಭೆ ಅನನ್ಯ ಎಂದು ಶ್ಲಾಘಿಸಿದರು.
ರಂಗಭೂಮಿ ನಿರ್ದೇಶಕರಾದ ಎಸ್.ಸಿ. ರಾಮಾಂಜಿನಪ್ಪ, ಡಿ.ಲಕ್ಷ್ಮೀನಾರಾಯಣ್, ಸ್ಟುಡಿಯೋ ಆನಂದ್ ರನ್ನು ಗೌರವಿಸಿ ಸನ್ಮಾನಿಸಲಾಯಿತು.ತಾಪಂ ಮಾಜಿ ಸದಸ್ಯ ಡಾ.ಡಿ.ಟಿ. ವೆಂಕಟೇಶ್, ಗಿಡ್ಡಪ್ಪನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮರಾಜು, ಡೇರಿ ಮಾಜಿ ಅಧ್ಯಕ್ಷ ಎಸ್.ವಿ.ರಮೇಶ್, ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಸಹಕಾರ ಬ್ಯಾಂಕ್ ನಿರ್ದೇಶಕ ಸೈಯದ್ ಮೆಹಬೂಬ್, ಮುತ್ಸಂದ್ರ ಆನಂದಪ್ಪ, ಚಿಕ್ಕಹರಳಗೆರೆ ಜಗದೀಶ್, ಗ್ರಾಪಂ ಸದಸ್ಯೆ ನವಿತಾ ಸುರೇಶ್, ಯನಗುಂಟೆ ರಮೇಶ್, ಬೆಟ್ಟಹಳ್ಳಿ ಮುನಿಸೊಣ್ಣಪ್ಪ, ದೇವರಾಜ್, ರಂಗಕಲಾವಿದ ಡಿ.ಲಕ್ಷ್ಮೀನಾರಾಯಣ್, ಸ್ಟುಡಿಯೋ ಆನಂದ್, ಬಾಲೇನಹಳ್ಳಿ ಗುಂಡಪ್ಪ, ಹನುಮಂತೇಗೌಡ, ಪ್ರಕಾಶ್, ಶಶಿಮಾಕನಹಳ್ಳಿ ಮುನಿರಾಜು, ಇತರರು ಇದ್ದರು.