ಕಲಾವಿದರಿಂದ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ

KannadaprabhaNewsNetwork |  
Published : Sep 14, 2026, 02:30 AM IST
ಸಂಡೂರಿನಲ್ಲಿ ಮಣ್ಣಿನ ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಷ ನೀಡುತ್ತಿರುವ ವಿಗ್ರಹ ತಯಾರಕ  ಅಕ್ಕಸಾಲಿ ರಾಘವೇಂದ್ರ ಆಚಾರ್ | Kannada Prabha

ಸಾರಾಂಶ

ನಾವು ಹಬ್ಬಕ್ಕೆ ಮೂರು ತಿಂಗಳಿರುವಾಗಲೇ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತೇವೆ. ಪ್ರತಿ ವರ್ಷ ಸುಮಾರು ೨೫೦ ಗಣೇಶನ ವಿಗ್ರಹ ತಯಾರಿಸುತ್ತೇವೆ

ಸಂಡೂರು: ವಿಘ್ನ ನಿವಾರಕ ಗಣೇಶನ ಹಬ್ಬಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಗಣೇಶನ ವಿಗ್ರಹ ತಯಾರಕರು ತಾವು ತಯಾರಿಸಿದ ಗೌರಿ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುವಲ್ಲಿ ನಿರತರಾಗಿದ್ದರೆ, ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮನೆ ಹಾಗೂ ಯುವಕ ಸಂಘಗಳು ಗಣೇಶನ ಪ್ರತಿಷ್ಠಾಪನೆಗೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸಂಡೂರಿನಲ್ಲಿ ನಾಲ್ಕೈದು ಕುಟುಂಬದವರು ಹಲವು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಮಣ್ಣಿನಿಂದ ವಿಗ್ರಹ ತಯಾರಿಸುತ್ತಿದ್ದಾರೆ. ಈ ಕುಟುಂಬದವರು ಹಬ್ಬ ಇನ್ನೂ ಮೂನ್ಕಾಲ್ಕು ತಿಂಗಳಿರುವಾಗಲೇ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣನ್ನು ತಂದು ಜನರ ಬೇಡಿಕೆಗಳಿಗನುಸಾರ ಜನರು ಬಯಸಿದ ಆಕಾರದ ಗಣೇಶನನ್ನು ತಯಾರಿಸುತ್ತಾರೆ. ಇವರು ಜನರಿಗೆ ಚಿರಪರಿಚಿತರಿರುವ ಕಾರಣ ಜನತೆ ಹಬ್ಬಕ್ಕೆ ಮುಂಚಿತವಾಗಿಯೇ ಬಂದು ಮುಂಗಡ ಹಣ ನೀಡಿ ತಯಾರಾದ ವಿಗ್ರಹ ಗುರುತಿಸಿ ತಮ್ಮ ಹೆಸರನ್ನು ಬರೆಯಿಸಿ ಅಡ್ವಾನ್ಸ್ ಹಣಕೊಟ್ಟು ಹಬ್ಬದ ದಿನ ಅಥವಾ ಅದರ ಹಿಂದಿನ ದಿನ ಬಂದು ತೆಗೆದುಕೊಂಡು ಹೋಗುವುದಾಗಿ ಹೇಳಿ ಹೋಗುವುದು ವಾಡಿಕೆ.

ವಿಗ್ರಹ ತಯಾರಕ ಅಕ್ಕಸಾಲಿ ರಾಘವೇಂದ್ರ ಆಚಾರ್‌ ಮಾತನಾಡಿ, ನಾವು ಹಬ್ಬಕ್ಕೆ ಮೂರು ತಿಂಗಳಿರುವಾಗಲೇ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತೇವೆ. ಪ್ರತಿ ವರ್ಷ ಸುಮಾರು ೨೫೦ ಗಣೇಶನ ವಿಗ್ರಹ ತಯಾರಿಸುತ್ತೇವೆ. ನಾವು ೯ಇಂಚಿನಿಂದ ೪ ಅಡಿಯವರೆಗಿನ ಗಣೇಶನ ವಿಗ್ರಹ ತಯಾರಿಸಿದ್ದೇವೆ. ಈಗಾಗಲೆ ಬಹುತೇಕ ಗಣೇಶನ ಮೂರ್ತಿ ಬುಕ್ ಮಾಡಿ ಅಡ್ವಾನ್ಸ್ ಹಣ ಕೊಟ್ಟು ಹೋಗಿದ್ದಾರೆ.

ಪರಿಸರ ಸ್ನೇಹಿ ಗಣಪ: ನಾವು ಪರಿಸರ ಸ್ನೇಹಿ ಮಣ್ಣಿನ ಗಣಪನಿಗೆ ವಾಟರ್ ಪೇಂಟನ್ನೇ ಬಳಸುತ್ತೇವೆ. ಇತ್ತೀಚೆಗೆ ಕೆಲವರು ಬಣ್ಣ ಹಚ್ಚದಿರುವ ಮಣ್ಣಿನ ಗಣಪನನ್ನು ಕೇಳುತ್ತಿರುವುದರಿಂದ ಅಂತಹ ಗಣಪನ ಮೂರ್ತಿ ರಚಿಸಿದ್ದೇವೆ. ಕೆಲ ಸಂಘ ಸಂಸ್ಥೆಗಳವರು ನೀಡಿದ ಆರ್ಡರ್‌ನಂತೆ ಮುಂಬೈ ಗಣೇಶ, ರಾಘವೇಂದ್ರ ಸ್ವಾಮಿ ಆಕಾರದ ಗಣೇಶ, ಭಕ್ತ ಮಾರ್ಕಂಡೇಯ ರೂಪದ ಗಣೇಶ, ಕುಮಾರಸ್ವಾಮಿ ಗಣೇಶ ಜೊತೆಗಿರುವ ಗಣೇಶ, ಖಂಡೋಬಾ ಗಣಪತಿ ಆಕಾರದ ಗಣೇಶ ತಯಾರಿಸುತ್ತೇವೆ ಎಂದರು.

ಪುರಸಭೆಯಿಂದಲೂ ಜಾಗೃತಿ: ಪಟ್ಟಣದ ಪುರಸಭೆಯ ಅಧಿಕಾರಿಗಳು ಇತ್ತೀಚೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ವಾಸಹಾಯಕ ಸಂಘಗಳ ಸದಸ್ಯರನ್ನು ಕರೆಯಿಸಿ ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ರೀತಿಯಲ್ಲಿ ಮಣ್ಣಿನ ಮೂರ್ತಿ ತಯಾರಿಸುವ ವಿಧಾನದ ಕುರಿತು ಜಾಗೃತಿ ಮಾಡಿಸಿದ್ದು ಗಮನಾರ್ಹ.

ಗಣೇಶ ವಿಸರ್ಜನೆಗೆ ವ್ಯವಸ್ಥೆ: ಪುರಸಭೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಶ್ರೀರಾಘವೇಂದ್ರಸ್ವಾಮಿ ಗುಡಿಯ ಬಳಿಯ ಬಾವಿಯ ಪಕ್ಕದಲ್ಲಿ ತಾತ್ಕಾಲಿಕವಾಗಿ ದೊಡ್ಡಗುಂಡಿ ತೋಡಿ, ಅದರಲ್ಲಿ ಬಾವಿಯ ನೀರನ್ನು ಹರಿಸಿ ಅಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ತತ್ವಗಳಿಗೆ ಮಾನ್ಯತೆ ಅಗತ್ಯ: ಎಚ್.ಕೆ. ಪಾಟೀಲ
ನೆಮ್ಮದಿಯ ಹುಡುಕಾಟದಲ್ಲಿ ತೊಡಗಿದ ಮನುಷ್ಯ: ಮುಪ್ಪಿನ ಬಸವಲಿಂಗ ಸ್ವಾಮೀಜಿ