ಹತ್ಯೆಗೀಡಾದ ಬಾಲಕಿ, ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಕುಟುಂಬಕ್ಕೆ ಮನೆ

KannadaprabhaNewsNetwork |  
Published : Oct 04, 2025, 12:00 AM IST
ಮದಮದ | Kannada Prabha

ಸಾರಾಂಶ

ಬಿಹಾರ ಮೂಲದ ದುರುಳನಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿದ್ದ ಬಾಲಕಿ ಹಾಗೂ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದ ನಾಗವೇಣಿ ರಾಯಚೂರ ಕುಟುಂಬಕ್ಕೂ ಶಾಸಕ ಮಹೇಶ ಟೆಂಗಿನಕಾಯಿ ಕೊಟ್ಟ ಮಾತಿನಂತೆ ಮನೆ ವಿತರಿಸಿದ್ದಾರೆ.

ಹುಬ್ಬಳ್ಳಿ:

ಐದು ವರ್ಷದ ಬಾಲಕಿಯ ಹತ್ಯೆಯಿಂದ ಕಂಗೆಟ್ಟಿದ್ದ ಬಡ ಕುಟುಂಬಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಆಶ್ರಯ ಯೋಜನೆಯಡಿ ಮನೆ ನೀಡಿದ್ದಾರೆ. ಈ ಮೂಲಕ ತಾವೂ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಪಿಯುಸಿಯಲ್ಲಿ ರ್‍ಯಾಂಕ್‌ ಪಡೆದಿದ್ದ ವಿದ್ಯಾರ್ಥಿನಿ ಕುಟುಂಬಕ್ಕೂ ಮನೆ ನೀಡಿದ್ದಾರೆ.

ಇಲ್ಲಿನ ವಿಶ್ವೇಶ್ವರನಗರದ ಸಬ್‌ಜೈಲ್‌ ಬಳಿಯಿರುವ ಲತಾ ಕುರಿ ಎಂಬುವವರ 5 ವರ್ಷದ ಪುತ್ರಿಯನ್ನು ಬಿಹಾರ ಮೂಲದ ದುರುಳನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆ ಮಾಡಿದ್ದ. ಆಗ ಶಾಸಕ ಟೆಂಗಿನಕಾಯಿ ಮನೆಗೆ ಭೇಟಿ ನೀಡಿ ಆ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಇಲ್ಲಿನ ಕಲ್ಲೂರು ಪ್ಲಾಟ್‌ನಲ್ಲಿ ಸ್ಮಾಟ್‌ಸಿಟಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಆಶ್ರಯ ಮನೆ ವಿತರಿಸಿದ್ದಾರೆ.

ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿಗೂ ಮನೆ:

ಇನ್ನು ಗೋಪನಕೊಪ್ಪ ಸರ್ಕಾರಿ ಕಾಲೇಜ್‌ನ ಪಿಯು ಕಲಾವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದ ನಾಗವೇಣಿ ರಾಯಚೂರ ಕುಟುಂಬಕ್ಕೂ ಆಶ್ರಯ ಯೋಜನೆಯಡಿ ಮನೆ ವಿತರಿಸಲಾಗಿದೆ. ಇವರ ಕುಟುಂಬ ಇಲ್ಲಿನ ಪತ್ರಕರ್ತರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಈ ಇಬ್ಬರಿಗೂ ಮನೆ ನೀಡುವುದಾಗಿ ಶಾಸಕರು ಮಾತು ಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಮನೆ ವಿತರಣೆ ವೇಳೆ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ರಘು ಧಾರವಾಡಕರ, ಪ್ರಶಾಂತ ಜಾದವ ಸೇರಿದಂತೆ ಫಲಾನುಭವಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ