ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿ ಕಾವೇರಿ ನದಿಗೆ ಮಾಜಿ ಸಿಎಂ ಕೃಷ್ಣರ ಚಿತಾಭಸ್ಮ ವಿಸರ್ಜನೆ

KannadaprabhaNewsNetwork |  
Published : Dec 16, 2024, 12:47 AM ISTUpdated : Dec 16, 2024, 12:52 PM IST
15ಕೆಎಂಎನ್ ಡಿ17,18 | Kannada Prabha

ಸಾರಾಂಶ

  ವೈದಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿಕೊಟ್ಟರು.ಈ ವೇಳೆ ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್ , ಅಮರ್ತ್ಯ ಹೆಗಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿದಂತೆ ಕುಟುಂಬ ಸದಸ್ಯರು  ಉಪಸ್ಥಿತರಿದ್ದರು.

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯಲ್ಲಿನ ಕಾವೇರಿ ನದಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಚಿತಾಭಸ್ಮವನ್ನು ಮೊಮ್ಮಗ ಅಮರ್ತ್ಯ ಹೆಗ್ಡೆ ವಿಸರ್ಜನೆ ಮಾಡಿದರು.

 ವೇದ ಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವೈಧಿಕರ ತಂಡ ಅಮರ್ತ್ಯ ಹೆಗಡೆ ಮೂಲಕ ಹಿಂದೂ ಸಂಪ್ರದಾಯದ ಪೂಜಾ ವಿಧಿ- ವಿಧಾನಗಳನ್ನು ನೆರವೇರಿಸಿದರು. ನಂತರ ಪವಿತ್ರ ಕಾವೇರಿ ನದಿಗೆ ಮೊಮ್ಮಗನ ಮೂಲಕ ಎಸ್.ಎಂ.ಕೃಷ್ಣರ ಅಸ್ತಿಯನ್ನು ವಿಸರ್ಜಿಸಲಾಯಿತು. ಅರ್ಚಕ ಲಕ್ಷ್ಮೀಶ್ ಸೇರಿದಂತೆ ಇತರ ವೈದಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿಕೊಟ್ಟರು.

ಈ ವೇಳೆ ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್ , ಅಮರ್ತ್ಯ ಹೆಗಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದ ಮುಖ್ಯಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ