ಮಹಿಳೆ ಮೇಲೆ ಹಲ್ಲೆ: ಪತಿ ಸೇರಿ 6 ಜನರ ವಿರುದ್ಧ ದೂರು

KannadaprabhaNewsNetwork |  
Published : Jun 04, 2024, 12:32 AM IST
ಕಲಾದಗಿ | Kannada Prabha

ಸಾರಾಂಶ

ಕಲಾದಗಿ ಹತ್ತಿರದ ಶಾರದಾಳದಲ್ಲಿ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲು ಒತ್ತಾಯ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಕಲಾದಗಿ ಹತ್ತಿರದ ಶಾರದಾಳದಲ್ಲಿ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲು ಒತ್ತಾಯ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳಗಾವಿ ಜೆಲ್ಲೆಯ ಗೋಕಾಕ ತಾಲೂಕಿನ ತಳಕಟ್ಟನಾಳದ ಗ್ರಾಮದ ರವಿಚಂದ್ರ ಮನೋಹರ ಅಜ್ಜನ್ನವರ, ಮನೋಹರ ರಾಮಣ್ಣ ಅಜ್ಜನ್ನವರ, ಹನುಮಂತ ರಾಮಣ್ಣ ಅಜ್ಜನ್ನವರ, ಮಹಾದೇವಿ ಮನೋಹರ ಅಜ್ಜನ್ನವರ, ಸುಜಾತಾ ಹನುಮಂತ ಅಜ್ಜನ್ನವರ, ಉದ್ದವ್ವ ಎಂಬ ಮಹಿಳೆ ಸೇರಿ ೬ ಜನರ ವಿರುದ್ಧ ಹಲ್ಲೆಗೊಳಗಾದ ಪವಿತ್ರಾ ರವಿಚಂದ್ರ ಅಜ್ಜನ್ನವರ ದೂರು ದಾಖಲಿಸಿದ್ದಾರೆ.

ಪವಿತ್ರಾ ತನ್ನ ತವರು ಮನೆ ಶಾರದಾಳದಲ್ಲಿದ್ದಾಗ ಸೋಮವಾರ ಮಧ್ಯಾಹ್ನ ಗಂಡನ ಮನೆಯವರಾದ ತಳಕಟ್ಟನಾಳದ ಆರೋಪಿತರು ಬೊಲೆರೋ ವಾಹನದಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಗೆ ಬರದಿದ್ದರೆ ನಿನ್ನನ್ನು ಜೀವಂತ ಉಳಿಸುವುದಿಲ್ಲ ಎಂದು ಧಮಕಿ ಹಾಕಿದ್ದರು. ಅಲ್ಲದೆ, ಎಳೆದಾಡಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು