ಪುಣೆ ಭಯೋತ್ಪಾದನೆ ಆರೋಪಿ ಅಬ್ದುಲ್‌ಗಾಗಿ ಎಟಿಎಸ್ ಹುಡುಕಾಟ

KannadaprabhaNewsNetwork |  
Published : Jun 22, 2024, 12:52 AM IST
ಮುಂಬೈ ಎಟಿಎಸ್ ತಂಡ ಭಟ್ಕಳದ ಕಚೇರಿಯೊಂದರ ಫಲಕಕ್ಕೆ ಅಂಟಿಸಿದ ಅಬ್ದುಲ್ ಕಬೀರ್ ಖಾದೀರ್‌ ಸುಲ್ತಾನನ ನೋಟಿಸ್. | Kannada Prabha

ಸಾರಾಂಶ

ನವಾಯತ್ ಕಾಲನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ ಎಂಬಾತನಿಗೆ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ನೋಟಿಸ್ ಜಾರಿ ಮಾಡಿ ಭಟ್ಕಳದಲ್ಲಿರುವ ಆತನ ಮನೆ ಹಾಗೂ ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳ ನೋಟೀಸ್ ಫಲಕಕ್ಕೆ ಅಂಟಿಸಲಾಗಿದೆ.

ಭಟ್ಕಳ: ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಶಂಕಿತ ಉಗ್ರನೆನ್ನಲಾದ ಪಟ್ಟಣದ ನಿವಾಸಿ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಟಿಎಸ್‌ ತಂಡವು ನೋಟಿಸ್‌ನ್ನು ಆತನ ಮನೆಗೆ ಅಂಟಿಸಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ನವಾಯತ್ ಕಾಲನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ ಎಂಬಾತನಿಗೆ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ನೋಟಿಸ್ ಜಾರಿ ಮಾಡಿ ಭಟ್ಕಳದಲ್ಲಿರುವ ಆತನ ಮನೆ ಹಾಗೂ ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳ ನೋಟೀಸ್ ಫಲಕಕ್ಕೆ ಅಂಟಿಸಲಾಗಿದೆ.

ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಆರೋಪಿಯಾದ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನನಿಗೆ ಜೂ. 21ರಂದು ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿತ್ತು. ಮುಂಬೈ ಎಟಿಎಸ್ ತಂಡ ಜೂ. 10ರಂದು ಭಟ್ಕಳಕ್ಕೆ ಆಗಮಿಸಿ ಆತನ ಮನೆ, ಭಟ್ಕಳ ತಹಸೀಲ್ದಾರ್‌ ಕಚೇರಿ ಹಾಗೂ ಪುರಸಭೆಯ ನೋಟಿಸ್‌ ಬೋರ್ಡಿಗೆ ನೋಟಿಸ್‌ ಅಂಟಿಸಿ ತೆರಳಿದೆ. 2008ರಲ್ಲಿ ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಎಟಿಎಸ್ ತಂಡ ಈತನಿಗಾಗಿ ಎಲ್ಲ ಕಡೆ ಹುಡುಕುತ್ತಲೇ ಇದ್ದು, ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ