ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ಸೊರಬ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾವು ಪೆಟ್ರೋಲ್ ಬಂಕ್ ಉದ್ಯಮ ನಡೆಸುತ್ತಿರುವುದು ಯಾವುದೇ ರಾಜಕೀಯ ಪಕ್ಷದ ಹಣದಿಂದಲ್ಲ, ಬದಲಾಗಿ ಹಲವು ಉದ್ಯಮದಿಂದ ಬಂದ ಲಾಭಾಂಶದಿಂದ ಬಂಕ್ ಆರಂಭಿಸಿದ್ದೇನೆ. ಇದಕ್ಕೆ ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆ ಕಟ್ಟುತ್ತಿದ್ದೇನೆ. ಇದು ಕಾಂಗ್ರೆಸ್ನ ಕೆಲವು ಮುಖಂಡರ ಕಣ್ಣು ಕುಕ್ಕುತ್ತಿದ್ದು, ತಮ್ಮ ಬೆಳವಣಿಗೆಯನ್ನು ಸಹಿಸದ ಸಚಿವರು ತಮ್ಮ ಹಿಂಬಾಲಕರನ್ನು ಛೂ ಬಿಟ್ಟು ಸಲ್ಲದ ಆರೋಪಗಳನ್ನು ಮಾಡಿ ಬೆದರಿಕೆವೊಡ್ಡುತ್ತಿದ್ದಾರೆ. ಆದರೆ ಇದಕ್ಕೆಲ್ಲ ತಗ್ಗುವ ಮಾತೇ ಇಲ್ಲ ಎಂದರು.ಕಾಂಗ್ರೆಸ್ ಮುಖಂಡರಾದ ತಬಲಿ ಬಂಗಾರಪ್ಪ, ಎಚ್. ಗಣಪತಿ ಅವರ ಬಗ್ಗೆ ತಮಗೆ ಗೌರವವಿದೆ. ಆದರೆ ತಮ್ಮ ಮೇಲೆ ಏಕ ವಚನ ಬಳಸಿದರೆ ಸುಮ್ಮನಿರುವ ವ್ಯಕ್ತಿ ನಾನಲ್ಲ. ಸಚಿವ ಮಧು ಬಂಗಾರಪ್ಪ ತಮಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ನಾಲಗೆ ತೊದಲುತ್ತದೆ ಎಂದು ಅವರೇ ಸಭೆ ಸಮಾರಂಭಗಳಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಅನಕ್ಷರಸ್ಥ ಶಿಕ್ಷಣ ಸಚಿವ ಎಂದು ಇಡೀ ರಾಜ್ಯದ ಜನರೇ ಹೇಳಿದ್ದಾರೆ. ಅದನ್ನೇ ತಾವೂ ಕೂಡಾ ಹೇಳಿದ್ದೇನೆ. ಇದಕ್ಕೆ ಪ್ರತ್ಯುತ್ತರ ಕೊಡಬೇಕಾದವರು ಶಿಕ್ಷಣ ಸಚಿವರು. ಹಿಂಬಾಲಕರನ್ನು ಬಿಟ್ಟು ಸಲ್ಲದ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವಕ್ಕೆ ಗೌರವ ತಂದುಕೊಡುವುದಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಏಕವಚನ ಬಳಸಿ ನಿಂದನೆಗೆ ಪ್ರಯತ್ನಿಸಿದರೆ ಅಂಥವರ ವಿರುದ್ದ ಕಾನೂನು ಮೊರೆಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ಗುರುಪ್ರಸನ್ನಗೌಡ, ಮಂಜುನಾಥ ಹುರಳಿ, ರಾಜು ಮಾವಿನಬಳ್ಳಿಕೊಪ್ಪ, ಸುರೇಶ್, ನಂದೀಶ್, ರವಿ ದ್ಯಾವನಹಳ್ಳಿ, ಸಂಜಯ್, ವಿನಾಯಕ ಬುಳ್ಳಿ, ಹರೀಶ, ಕೇಶವ ಪೇಟ್ಕರ್ ಮೊದಲಾದವರು ಹಾಜರಿದ್ದರು.