ಜೈನಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮ

KannadaprabhaNewsNetwork |  
Published : Jul 20, 2026, 02:30 AM IST
ಕ್ಯಾಪ್ಷನ19ಕೆಡಿವಿಜಿ35 ದಾವಣಗೆರೆಯಲ್ಲಿಂದು ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮವು ನಡೆಯಿತು. .....ಕ್ಯಾಪ್ಷನ19ಕೆಡಿವಿಜಿ36ದಾವಣಗೆರೆಯಲ್ಲಿಂದು ನಡೆದ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮದ ಅಂಗವಾಗಿ  ಅರಿಹಂತ್ ಅಪಾರ್ಟ್ ಮೆಂಟ್ ಮುಂಭಾಗ ಬೃಹತ್ ರಂಗೋಲಿ ಮುಂದೆ ಜೈನ ಸಮಾಜದ ಮಹಿಳೆಯರು ಕುಂಭ ಹಿಡಿದು ನಿಂತಿರುವುದು. | Kannada Prabha

ಸಾರಾಂಶ

ಆಚಾರ್ಯ ರಾಜರಕ್ಷಿತ ಸುರೀಶ್ವರಜೀ ಮಹಾರಾಜ ಹಾಗೂ ಯುವ ಪ್ರವಚನಕಾರ ಪಂನ್ಯಾಸ ನಯರಕ್ಷಿತ ವಿಜಯಜೀ ಮಹಾರಾಜ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮವು ಭಾನುವಾರ ಬೆಳಗ್ಗೆ ಸಹಸ್ರಾರು ಭಕ್ತರೊಂದಿಗೆ ನಡೆಯಿತು.

- ಪ್ರಮುಖ ಬೀದಿಗಳಲ್ಲಿ ಮೆರವಣಿಗೆ । ಮುಂಬೈ, ಪುಣೆ, ಸೂರತ್ ಇತರೆಡೆಗಳ ಭಕ್ತರು ಭಾಗಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಆಚಾರ್ಯ ರಾಜರಕ್ಷಿತ ಸುರೀಶ್ವರಜೀ ಮಹಾರಾಜ ಹಾಗೂ ಯುವ ಪ್ರವಚನಕಾರ ಪಂನ್ಯಾಸ ನಯರಕ್ಷಿತ ವಿಜಯಜೀ ಮಹಾರಾಜ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮವು ಭಾನುವಾರ ಬೆಳಗ್ಗೆ ಸಹಸ್ರಾರು ಭಕ್ತರೊಂದಿಗೆ ನಡೆಯಿತು.

ನಗರದ ಪಿ.ಬಿ. ರಸ್ತೆಯಲ್ಲಿರುವ ಅರಿಹಂತ್ ಅಪಾರ್ಟ್‌ಮೆಂರ್ಟ್‌ನಿಂದ ಆರಂಭಗೊಂಡ ಮೆರವಣಿಗೆಯು ವಸಂತ ಟಾಕೀಸ್ ರಸ್ತೆ, ಗಡಿಯಾರ ಕಂಬ ಸರ್ಕಲ್‌, ವಿಜಯಲಕ್ಷ್ಮೀ ರಸ್ತೆ ಮಾರ್ಗವಾಗಿ ಚೌಕಿಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ ದೇವಸ್ಥಾನದವರೆಗೆ ನಡೆಯಿತು.

ಮೆರವಣಿಗೆಯಲ್ಲಿ ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಮುಂಬೈ, ಪುಣೆ, ಸೂರತ್, ಅಹಮದಾಬಾದ್, ಈಚಲಕಾರಂಜಿಯಿಂದ ಆಗಮಿಸಿದ ಸಹಸ್ರಾರು ಭಕ್ತರು ಭಾಗವಹಿಸಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದರು.

ರಾಜ್ಯದಲ್ಲಿ ಆಚಾರ್ಯ ರಾಜರಕ್ಷಿತ ಸೂರೀಶ್ವರ ಮಹಾರಾಜರ ಮೊದಲ ಚಾತುರ್ಮಾಸ ಇದಾಗಿದ್ದು, ದಾವಣಗೆರೆ ಜೈನ ಸಂಘ ಹಾಗೂ ಟ್ರಸ್ಟಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಆಚಾರ್ಯ ರಾಜರಕ್ಷಿತ ಸೂರೀಶ್ವರ ಮಹಾರಾಜರು ಆಶೀರ್ವಚನ ನೀಡಿದರು.

ಇಲ್ಲಿನ ಜಿನಾಲಯದಲ್ಲಿ ಪ್ರತಿ ಶನಿವಾರ ಬೆಳಗ್ಗೆ 7 ಗಂಟೆಯಿಂದ ಪ್ರಭುಮಿಲನ ಕಾರ್ಯಕ್ರಮ ಇರುತ್ತದೆ. ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ ಶ್ರೀ ಸಂಘ ಉತ್ಕರ್ಷ ಶಿಬಿರ, ಬೆಳಗ್ಗೆ 7 ಗಂಟೆಗೆ ಮಕ್ಕಳ ಅಷ್ಟಪ್ರಕಾರೀ ಪೂಜೆ, ಮಧ್ಯಾಹ್ನ 3.30ಕ್ಕೆ ಟೀನೇಜರ್‌ಗಳ ಶಿಬಿರ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಭವ್ಯ ಮೆರವಣಿಗೆಯಲ್ಲಿ ಶ್ರೀ ಸುಪಾರ್ಶ್ವನಾಥ ಜೈನ ಶ್ವೇತಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ನರೇಂದ್ರ ಜೈನ್, ಉಪಾಧ್ಯಕ್ಷ ಶ್ರೇಯಾಂಸ ಸಂಘವಿ, ಕಾರ್ಯದರ್ಶಿ ವಿನೋದ್ ಜೈನ್, ಟ್ರಸ್ಟಿಗಳಾದ ಕುಂದನ್ ಮಲ್ ಜೈನ್, ಕುಮಾರ್ ಪಾಲ್ ಜೈನ್, ಮೋಹನ್ ಲಾಲ್ ಜೈನ್, ಪಾರಸ್ ಜೈನ್, ಕಿಶೋರ್ ಜೈನ್, ಗೌತಮ್ ಜೈನ್, ನಿತೇಶ್ ಜೈನ್, ಉತ್ತಮ್ ಜೈನ್, ವಿಶಾಲ್ ಜೈನ್, ಜಿತೇಂದ್ರ ಜೈನ್ ಹಾಗೂ ಸಮಾಜ ಬಾಂಧವರು, ಇತರರು ಭಾಗವಹಿಸಿದ್ದರು.

- - -

-19ಕೆಡಿವಿಜಿ35: ದಾವಣಗೆರೆಯಲ್ಲಿ ಭಾನುವಾರ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮವು ನಡೆಯಿತು.

-19ಕೆಡಿವಿಜಿ36: ದಾವಣಗೆರೆಯಲ್ಲಿ ಭಾನುವಾರ ನಡೆದ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಅರಿಹಂತ್ ಅಪಾರ್ಟ್ ಮೆಂಟ್ ಮುಂಭಾಗ ಬೃಹತ್ ರಂಗೋಲಿ ಮುಂದೆ ಜೈನ ಸಮಾಜದ ಮಹಿಳೆಯರು ಕುಂಭ ಹಿಡಿದು ನಿಂತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

SIR ಚಾಮರಾಜನಗರ ಜಿಲ್ಲೆ ಪ್ರಗತಿಗೆ ಸಿಇಒ ಅನ್ಬುಕುಮಾರ್‌ ಮೆಚ್ಚುಗೆ
ಗೃಹಜ್ಯೋತಿ ಮರುಪರಿಶೀಲನೆ ಪ್ರಕ್ರಿಯೆಗೆ ಪರ್ಯಾಯ ವ್ಯವಸ್ಥೆ: ಶ್ರೀನಿವಾಸ್ ನಂದಿಗಾವಿ