ಹಬ್ಬಕ್ಕೆ ಹೂವು ತರಲು ಹೊರಟ ಆಟೋ ಡ್ರೈವರ್ ಸಾವು

KannadaprabhaNewsNetwork |  
Published : Aug 22, 2026, 01:15 AM IST
೨೧ಕೆಎಲ್‌ಆರ್-೨ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಪಂ ಸಿಇಓ. | Kannada Prabha

ಸಾರಾಂಶ

ರಾಷ್ಟ್ರೀಯ ಹದ್ದಾರಿ 44ರ ದೊಡ್ಡ ಪೇಯಲಗುರ್ಕಿ ಗ್ರಾಮದ ಬಳಿ ಹಿಂದಿನಿಂದ ಟಿಪ್ಪರ್ ಲಾರಿ ಗುದ್ದಿದೆ. ಅಪಘಾತದ ರಭಸಕ್ಕೆ ವೆಂಕಟೇಶ್‌ಗೆ ಗಂಭೀರ ಗಾಯವಾಗಿದೆ.

ಆಪೇ ಆಟೋ ಟಿಪ್ಪರ್ ನಡುವೆ ಡಿಕ್ಕಿ । ಹೆದ್ದಾರಿ 44ರ ದೊಡ್ಡ ಪೇಯಲಗುರ್ಕಿ ಬಳಿ ಘಟನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಪೇ ಆಟೋ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಆಟೋ ಡ್ರೈವರ್ ಸ್ಥಳದಲ್ಲೇ ಮೃತನಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡ ಪೇಯಲಗುರ್ಕಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಮೃತ ಆಟೋ ಚಾಲಕನನ್ನು ಪೆರೇಸಂದ್ರ ಗ್ರಾಮದ 58 ವರ್ಷದ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಮೃತ ವೆಂಕಟೇಶ್ ತನ್ನ ಪತ್ನಿ ಮಂಜುಳಾ ಜೊತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ತರಲು ತನ್ನ ಆಪೇ ಆಟೋದಲ್ಲಿ ಪೆರೇಸಂದ್ರ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದಾಗ ರಾಷ್ಟ್ರೀಯ ಹದ್ದಾರಿ 44ರ ದೊಡ್ಡ ಪೇಯಲಗುರ್ಕಿ ಗ್ರಾಮದ ಬಳಿ ಹಿಂದಿನಿಂದ ಟಿಪ್ಪರ್ ಲಾರಿ ಗುದ್ದಿದೆ. ಅಪಘಾತದ ರಭಸಕ್ಕೆ ವೆಂಕಟೇಶ್‌ಗೆ ಗಂಭೀರ ಗಾಯವಾಗಿದೆ. ಆದರೆ ಪತ್ನಿ ಮಂಜುಳಾಗೆ ಸಣ್ಣಪುಟ್ಟ ಗಾಯಗಳಾಗಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆ್ಯಂಬುಲೆನ್ಸ್‌ಗೆ ಕಾಲ್ ಮಾಡಿ ಒಂದು ಗಂಟೆ ಆದರೂ ಬಂರಲಿಲ್ಲ. ಸಮಯಕ್ಕೆ ಬಾರದಿದ್ದರಿಂದ ವೆಂಕಟೇಶ್ ಮೃತನಾಗಿದ್ದಾನೆ. ಸಮಯಕ್ಕೆ ಸರಿಯಾಗಿ ಬಂದಿದ್ದರೆ ನನ್ನ ಗಂಡ ಉಳಕೊಳ್ಳುತಿದ್ದಾ. ನನ್ನ ತೊಡೆಯ ಮೇಲೆಯೇ ನನ್ನ ಪತಿ ನರಳಿ ನರಳಿ ಪ್ರಾಣ ಬಿಟ್ಟಾ ಎಂದು ಹೆಂಡತಿ ಮಂಜುಳಾ ಗೋಳಿಡುತಿದ್ದರು.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಭಿವೃದ್ಧಿಯೇ ಲಯನ್ಸ್ ಧ್ಯೇಯ: ಡಾ.ಕೃಷ್ಣೇಗೌಡ
ಮಂಡ್ಯ: ೬೭ ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ..!