ಜಮೀನು ಖರೀದಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ

KannadaprabhaNewsNetwork |  
Published : Aug 22, 2024, 12:52 AM IST
ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಪ್ರಸ್ತಾವಿತ ಸುಣ್ಣದಕಲ್ಲು ಬ್ಲಾಕ್‌ನ ಜಮೀನಿನ ಕುರಿತಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ವತಿಯಿಂದ ಪರಿಸರ ಸಾರ್ವಜನಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರು ಗ್ರಾಮಸ್ಥರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ದಿಗ್ಗಾಂವ ಗ್ರಾಮದಲ್ಲಿ ಅಲ್ಟ್ರಾಟೇಕ್ ಕಂಪನಿಯವರು ಸ್ಥಾಪಿಸಲು ಉದ್ದೇಶಿಸಿರುವ ಸುಣ್ಣದಕಲ್ಲು ಗಣಿಗಾರಿಕೆ ಯೊಜನೆಗೆ ಗ್ರಾಮದಿಂದ ಸುಮಾರು ೨೦೦೦ ಸಾವಿರ ಎಕರೆ ಜಮೀನು ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಗ್ರಾಮಸ್ಥರು ಜಮೀನು ನೀಡಲು ಒಪ್ಪಿಗೆ ಇದ್ದು ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಮತ್ತು ಕಂಪನಿಯವರು ಮಧ್ಯೆ ಖರೀದಿ ವ್ಯವಹಾರ ನಡೆಯಬೇಕು ಎಂದು ಗ್ರಾಮಸ್ಥರ ಪರವಾಗಿ ಮಾಜಿ ಜಿಪಂ ಸದಸ್ಯ ಶಿವರುದ್ರಪ್ಪ ಬೀಣಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಅಲ್ಟ್ರಾಟೇಕ್ ಕಂಪನಿಯವರು ಸ್ಥಾಪಿಸಲು ಉದ್ದೇಶಿಸಿರುವ ಸುಣ್ಣದಕಲ್ಲು ಗಣಿಗಾರಿಕೆ ಯೊಜನೆಗೆ ಗ್ರಾಮದಿಂದ ಸುಮಾರು ೨೦೦೦ ಸಾವಿರ ಎಕರೆ ಜಮೀನು ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಗ್ರಾಮಸ್ಥರು ಜಮೀನು ನೀಡಲು ಒಪ್ಪಿಗೆ ಇದ್ದು ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಮತ್ತು ಕಂಪನಿಯವರು ಮಧ್ಯೆ ಖರೀದಿ ವ್ಯವಹಾರ ನಡೆಯಬೇಕು ಎಂದು ಗ್ರಾಮಸ್ಥರ ಪರವಾಗಿ ಮಾಜಿ ಜಿಪಂ ಸದಸ್ಯ ಶಿವರುದ್ರಪ್ಪ ಬೀಣಿ ಒತ್ತಾಯಿಸಿದರು.

ದಿಗ್ಗಾಂವ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ೧೯೮೨, ಹಾಗೂ ೨೦೦೫ರಲ್ಲಿ ಎರಡು ಬಾರಿ ಗ್ರಾಮದಿಂದ ಅಲ್ಟ್ರಾಟೇಕ್ ಕಂಪನಿಯವರು ಜಮೀನು ಖರೀದಿ ಮಾಡಿದ್ದು ಕಂಪನಿಯು ಸಿ.ಎಸ್.ಆರ್ ಅಡಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ. ಇದರಿಂದ ಗ್ರಾಮದಲ್ಲಿ ಹಲವಾರು ಮೂಲ ಸೌಲಭ್ಯಗಳನ್ನು ಎದುರಿಸುತ್ತಿದೆ. ಅಲ್ಲದೇ ಗ್ರಾಮದಿಂದ ಮಳಖೇಡಕ್ಕೆ ತೆರಳಲು ಸೂಕ್ತ ರಸ್ತೆ ಸಂಪರ್ಕ ಇಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.ಈ ಬಾರಿ ಅಂತಹ ತಪ್ಪುಗಳು ಆಗದಂತೆ ತಡೆಯಬೇಕು ಮತ್ತು ರೈತರು ನೀಡುವ ಜಮೀನುಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಮತ್ತು ಜಮೀನು ನೀಡುವ ಪ್ರತಿ ರೈತರ ಕುಟುಂಬಕ್ಕೆ ಒಬ್ಬರಿಗೆ ಉದ್ಯೊಗ, ಜಮೀನು ನೀಡಿದ ರೈತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು, ಗ್ರಾಮವನ್ನು ದತ್ತು ಪಡೆದುಕೊಂಡು ಮೂಲ ಸೌಲಭ್ಯವನ್ನು ಕಲ್ಪಿಸಬೇಕು ಗ್ರಾಮಸ್ಥರ ಆರೊಗ್ಯ ಕಾಪಾಡುವ ಹಿನ್ನಲೆಯಲ್ಲಿ ಪರಿಸರ ಮಾಲಿನ್ಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ, ಗ್ರಾಮಸ್ಥರಾದ ಸಿದ್ದಣಗೌಡ ಪೊಲೀಸ್ ಪಾಟಿಲ್, ಚನ್ನವೀರ ಕಣಗಿ, ಶ್ರೀಶೈಲ್ ಪಾಟೀಲ್, ಶ್ರೀಮಂತ ಗುತ್ತೆದಾರ, ಶಾಮರಾಯ ಸಂಗಾವಿ, ಭಿಮರಾಯ ದೇವರ, ಗುರುಲಿಂಗಪ್ಪ ಬಂದಳ್ಳಿ, ಜಗದೀಶ ಚವ್ವಾಣ, ನಾಗರಾಜ ಹಡಪದ ಅವರು ಸೇರಿದಂತೆ ಹಲವರು ಮಾತನಾಡಿ ಗ್ರಾಮದ ಫಲವತ್ತಾದ ಭೂಮಿಯನ್ನು ರೈತರು ಕಂಪನಿಗೆ ನೀಡುತ್ತಿದ್ದು ಅವರ ಮುಂದಿನ ಭವಿಷ್ಯಕ್ಕಾಗಿ ಅವರಿಗೆ ಅವರ ಕುಟುಂಬಕ್ಕೆ ಅನ್ಯಾಯವಾಗದಂತೆ ಸೂಕ್ತ ಸೌಲಭ್ಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಕಂಪನಿಯ ಮುಖ್ಯಸ್ಥ ಕೆ.ವಿ. ರೆಡ್ಡಿ ಕಂಪನಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಯಾಮಾವಳಿಯ ಅನುಗುಣವಾಗಿ ಮತ್ತು ಮಾರ್ಗಸೂಚಿಯಂತೆ ಗ್ರಾಮಸ್ಥರ ಒಳಿತಿಗೆ, ಜನರ ಆರೊಗ್ಯ ಕಾಪಾಡುವ ಸಂಕಲ್ಪದಿಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಪರಿಸರ ಅಧಿಕಾರಿಗಳಾದ ರೇಖಾ, ಸೊಮಶೇಖರ, ತಹಸೀಲ್ದಾರ ಅಂಬರೇಶ ಬಿರಾದರ, ಕಂಪನಿಯ ಮುಖ್ಯಸ್ಥ ಉದಯ ಬಸಯ್ಯ, ಉಪಾಧ್ಯಕ್ಷ ನಾರಾಯಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ, ಪಿಎಸ್‌ಐ ಗಳಾದ ಶ್ರೀಶೈಲ ಅಂಬಾಟಿ, ಚೇತನ ಪ್ರಜಾರಿ, ಚಂದ್ರಾಮಪ್ಪ ಬಳಿಚಕ್ರ ಬಂದೋಬಸ್ತ್‌ ವ್ಯವಸ್ಥೆ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ