ಕನ್ನಡಪ್ರಭ ವಾರ್ತೆ ಮೈಸೂರು
ಸೈಬರ್ ಭದ್ರತಾ ತಜ್ಞ ಆರ್. ಧನೂಪ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹ್ಯಾಕಿಂಗ್, ಕ್ರಿಪ್ಟೋಗ್ರಫಿ, ಫಿಶಿಂಗ್ ಮತ್ತು ಕ್ರೂರ ಬಲ ತಂತ್ರಗಳು ಹಾಗೂ ನಮ್ಮ ಡೇಟಾ ಸೋರಿಕೆಯಾಗಬಹುದಾದ ಅಸಂಖ್ಯಾತ ದಾರಿಗಳನ್ನು ತಿಳಿಸಿದರು.
ಅಲ್ಲದೇ, ಹ್ಯಾಕಿಂಗ್ ಮಾಡುವ ಪ್ರದರ್ಶನವನ್ನು ನಡೆಸಿ, ನಮ್ಮ ಡೇಟಾವು ಅನಧಿಕೃತವಾಗಿ ಬಳಕೆಯಾಗದಂತೆ ರಕ್ಷಿಸಲು ಅಧಿಕೃತವಾದ ಸುರಕ್ಷಿತ ಪಾಸ್ ವರ್ಡ್ಗಳನ್ನು ರೂಪಿಸುವ ಮಾರ್ಗದರ್ಶನ ನೀಡಿದರು.ಸೈಬರ್ ಭದ್ರತೆ ಮತ್ತು ನೈತಿಕ ಹ್ಯಾಕಿಂಗ್ನಲ್ಲಿ ಪರಿಣತಿ ಹೊಂದಿರುವ ಪ್ರಸಿದ್ಧ ಸಂಸ್ಥೆಯಾದ ಟೆಕ್ಟೈಹಾರ್ಟ್ ಭಾರತದಲ್ಲಿ ಹೆಚ್ಚುತ್ತಿರುವ ಇಂಟರ್ ನೆಟ್ಗಳ ಹಗರಣಗಳ ಬೆದರಿಕೆಯನ್ನು ಎದುರಿಸಲು ಉಪಕ್ರಮವಾದ ಸೈಬರ್ ಸ್ಮಾರ್ಟ್ ಅನ್ನು ಪ್ರಾರಂಭಿಸಿದೆ. ಇದು ಸೈಬರ್ ಸುರಕ್ಷತೆಯ ಪ್ರಾಮುಖ್ಯತೆಯ ಬಗ್ಗೆ ಶಾಲೆಗಳು, ಕಾಲೇಜುಗಳು, ವಸತಿ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಇತರೆ ಸಂಘಗಳು ಸೇರಿದಂತೆ ಸಮಾಜದ ವಿವಿಧ ವಿಭಾಗಗಳಲ್ಲಿ ಮೂಡಿಸುವ ಮತ್ತು ಈ ಕುರಿತು ಶಿಕ್ಷಣ ನೀಡುವಗುರಿಯನ್ನು ಹೊಂದಿದೆ. ದೇಶಾದ್ಯಂತ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತಜ್ಞರ ಚರ್ಚೆಗಳು, ಪ್ರತ್ಯಕ್ಷ ಪ್ರಾತ್ಯಕ್ಷಿಕೆಗಳು ಮತ್ತು ಸಂವಾದಾತ್ಮಕ ಪ್ರಶ್ನೋತ್ತರ ಅಧಿವೇಶನಗಳ ಮೂಲಕ ಆನ್ಲೈನ್ ಬೆದರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುತ್ತಿದೆ. ಇದೊಂದು ವಿಶ್ವಾಸಾರ್ಹ ಸಂಸ್ಥೆಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.
ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಹಾಗೂ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಮೃದುಲಾ ಸೋಜನ್, ಎನ್.ಸಿ.ಸಿ. ಅಧಿಕಾರಿ ಲ್ಯೂಟಿನೆಂಟ್ ಆರ್.ಕುಮಾರ್, ಎಸ್.ಲಿಂಗರಾಜು, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ಸೈಬರ್ ಅಪರಾಧ ತನಿಖಾ ತರಬೇತುದಾರ, ಸಿಐಡಿ, ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.