ಕನ್ನಡಪ್ರಭ ವಾರ್ತೆ ಉಡುಪಿ
ಅವರು ಇಲ್ಲಿನ ಕ್ಯಾತ್ಯಾಯನಿ ನಗರದಲ್ಲಿ ವೇದಿಕೆಯ ವತಿಯಿಂದ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ವಿಶ್ವದಲ್ಲಿ ಭಾರತ ಜನಸಂಖ್ಯೆ ಮೊದಲನೇ ಸ್ಥಾನದಲ್ಲಿದೆ. ಆದರೆ ಜನರು ಅವಲಂಬಿತವಾಗಿರುವ ಈ ದೇಶದ ಪ್ರಕೃತಿ ಮಾತ್ರ ಇದ್ದಷ್ಟಿದೆ. ದೇಶದ 140 ಕೋಟಿ ಜನಸಂಖ್ಯೆಯಲ್ಲಿ 70 ಕೋಟಿ ಯುವಕ, ಯುವತಿಯರು ಇದ್ದಾರೆ. 40 ಕೋಟಿ ಮಕ್ಕಳು ಮತ್ತು 30 ಕೋಟಿ ವೃದ್ಧರಿದ್ದಾರೆ. ಅವರ ಅಗತ್ಯತೆಗಳನ್ನು ಈಡೇರಿಸಲು ಪ್ರಕೃತಿ ಬೆಳೆಯುತ್ತಿಲ್ಲ. ಇದನ್ನು ಎಲ್ಲರೂ ಮನಗಾಣಬೇಕು. ಜನಸಂಖ್ಯೆ ನಿಯಂತ್ರಣಕ್ಕೆ ಧರ್ಮವನ್ನು ತಳಕುಹಾಕುವುದು ಸರಿಯಲ್ಲ ಎಂದು ಹೇಳಿದರು.ವೇದಿಕೆಯ ಮೇಲೆ ವೇದಿಕೆಯ ಪದಾಧಿಕಾರಿಗಳಾದ ಶ್ರೀನಿವಾಸ ರಾವ್ ಕೆ., ಅನುರಾಧಾ ಜಿ. ಎಸ್., ಸುರೇಶ್, ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.
ಸದಸ್ಯರಾದ ಸರೋಜಿನಿ, ರಕ್ಷಿತಾ, ಮುರುಳಿ, ರಾಜೀವ್, ರವೀಶ್, ಸತೀಶ್, ಪ್ರಮೋದ್, ಬಸವರಾಜ್ ಕೆ. ಗಣೇಶ್ ಸದಸ್ಯರಾದ ಶೋಭಾ ಪಿ, ರಾಘವೇಂದ್ರ, ಶ್ರೀದೇವಿ ದೀಪಾ, ವೇದಿಕೆ ಸದಸ್ಯರಾದ ಸುರೇಶ್ ಮತ್ತು ಅನುರಾಧಾ ಜಿ ಎಸ್., ಶ್ರೀನಿವಾಸ ದೇವಾಡಿಗ, ಲೀಲಾ ಎನ್. ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.