ಪರ್ಯಾಯವಾಗಿ ಜೈವಿಕ ಇಂಧನದ ಅರಿವು ಇಂದು ಅಗತ್ಯ: ಕೆವಿಕೆ ಮುಖ್ಯಸ್ಧ ನರೇಶ್

KannadaprabhaNewsNetwork |  
Published : Sep 02, 2026, 03:00 AM IST
ರೇಶ್‌ | Kannada Prabha

ಸಾರಾಂಶ

ಜೈವಿಕ ಇಂಧನ ಹಲವಾರು ಕೈಗಾರಿಕೆಗಳಿಗೆ ಮತ್ತು ಕೆಲವು ವಾಹನಗಳಿಗೆ ಒಂದು ಉತ್ತಮವಾದ ಪರ್ಯಾಯ ಇಂಧನವಾಗಿದ್ದು ಜನರು ಇದರ ಬಗ್ಗೆ ಅರಿವು ಮಾಡಿಕೊಳ್ಳುವುದು ಅವಶ್ಯಕ ಎಂದು ಕೆವಿಕೆ ಮುಖ್ಯಸ್ಧ ಎನ್‌.ಟಿ.ನರೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜೈವಿಕ ಇಂಧನ ಹಲವಾರು ಕೈಗಾರಿಕೆಗಳಿಗೆ ಮತ್ತು ಕೆಲವು ವಾಹನಗಳಿಗೆ ಒಂದು ಉತ್ತಮವಾದ ಪರ್ಯಾಯ ಇಂಧನವಾಗಿದ್ದು ಜನರು ಇದರ ಬಗ್ಗೆ ಅರಿವು ಮಾಡಿಕೊಳ್ಳುವುದು ಅವಶ್ಯಕ ಎಂದು ಕೆವಿಕೆ ಮುಖ್ಯಸ್ಧ ಎನ್‌.ಟಿ.ನರೇಶ್ ತಿಳಿಸಿದರು.

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಚಾಮರಾಜನಗರದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಸಾಮಾಜಿಕ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್, ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ-೨೦೨೬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೈವಿಕ ಇಂಧನ ಸಸ್ಯಗಳನ್ನು ರೈತರು ಬೆಳೆಸುವುದರಿಂದ ರೈತರು ತಮ್ಮ ಕೃಷಿ ವ್ಯವಸ್ಥೆಯಲ್ಲಿ ಸಸ್ಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹವಾಮಾನ ವೈಪರೀತ್ಯಕ್ಕೆ ಪೆಟ್ರೋಲಿಯಂ ಇಂಧನದ ವಿವೇಚನ ರಹಿತ ಬಳಕೆ ಕಾರಣವಾಗಿದ್ದು,ಜೈವಿಕ ಇಂಧನ ಸಸ್ಯಗಳಲ್ಲಿ ಹಲವು ಔಷಧೀಯ ಗುಣಗಳು ಕೂಡ ಇದ್ದು ಇವುಗಳ ಬಳಕೆ ಮಾನವನ ಆರೋಗ್ಯ ನಿರ್ವಹಣೆಯಲ್ಲೂ ಕೂಡ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಮಾಲಿನ್ಯ ಹೆಚ್ಚುತ್ತಿದ್ದು ಹವಾಮಾನ ವೈಪರೀತ್ಯದಿಂದ ಹಲವಾರು ಪ್ರಾಕೃತಿಕ ವಿಕೋಪಗಳು, ದುಷ್ಪರಿಣಾಗಳು ಘಟಿಸುತ್ತಿದ್ದು ಸಮತೋಲನ ಕಾಯ್ದುಕೊಳ್ಳಲು ಪೆಟ್ರೋಲಿಯಂ ಇಂಧನಗಳ ಬಳಕೆ ಕಡಿಮೆ ಮಾಡಿ ಜೈವಿಕ ಇಂಧನಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಹೊಂಗೆ ಸಸಿ ನೆಡುವುದರ ಜೊತೆಗೆ ಕೇಂದ್ರದಲ್ಲಿನ ಟ್ರ್ಯಾಕ್ಟರ್‌ಗೆ ಜೈವಿಕ ಇಂಧನ ತುಂಬಿಸಿ ವಾಹನ ಚಾಲನೆಗೆ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಜೈವಿಕ ಇಂಧನ ಸಸಿಗಳು ಮತ್ತು ಇತರ ಅರಣ್ಯ ಸಸಿಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಅಖಿಲ ಭಾರತ ಸುಸಂಘಟಿತ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆಯ ಮುಖ್ಯಸ್ಧ ಡಾ.ಶಶಿಕುಮಾರ್‌ ಸಿ. ಮಾತನಾಡಿ, ಜೈವಿಕ ಇಂಧನ ಸಸಿಗಳ ಬಳಕೆಯಿಂದ ಪ್ರಕೃತಿಯ ಸುಧಾರಣೆ ಜತೆಗೆ ಹವಾಮಾನ ವೈಪರೀತ್ಯ ಬದಲಾವಣೆಗೆ ಸಹಕಾರಿಯಾಗುತ್ತದೆ ಮತ್ತು ಎಲ್ಲೆಲ್ಲಿ ಬರಡು ಭೂಮಿ ಹಾಗೂ ಪಾಳು ಭೂಮಿಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸುವ ಮೂಲಕ ರೈತರ ಆರ್ಥಿಕತೆ ಉತ್ತಮವಾಗುವುದು ಎಂದು ತಿಳಿಸಿದರು.

ಕೇಂದ್ರದ ಆವರಣದಲ್ಲಿ ಕಾರ್ಯಕ್ರಮದ ನಿಮಿತ್ತ ಕಿಸಾನ್ ಸಮೃದ್ಧಿ ತಾಂತ್ರಿಕ ಜೈವಿಕ ಉತ್ಪನ್ನಗಳಾದ ಹೊಂಗೆ ಹಿಂಡಿ, ಬೇವಿನ ಹಿಂಡಿ, ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಬಯೋ ಡೀಸೆಲ್, ಉಪ ಉತ್ಪನ್ನಗಳಾದ ದೀಪದ ಎಣ್ಣೆ, ಜೈವಿಕ ಸಾಬೂನು ಮತ್ತು ಜೈವಿಕ ಇಂಧನ ಸಸ್ಯಗಳು ಇವುಗಳನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ೪೦ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೇಂದ್ರದ ಸಹಾಯಕ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಬಿ.ಪಂಪನಗೌಡ, ಜೈವಿಕ ಇಂಧನ ಪ್ರಾತ್ಯಕ್ಷಿಕೆ ಘಟಕದ ಯೋಜನಾ ಸಹಾಯಕಿ ಅನನ್ಯ, ಡಾ.ಬಿ.ಪಂಪನಗೌಡ, ಕೇಂದ್ರದ ಗೃಹ ವಿಜ್ಞಾನಿ ಡಾ.ದೀಪಾ ಜೆ., ದತ್ತು ಗ್ರಾಮ ಯೋಜನೆಯ ಸಹಾಯಕ ಮಂಜು, ರೈತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೧೨ ಕೋಟಿ ರು. ಅನುದಾನ
ನಾಳೆ, ನಾಡಿದ್ದು ನಗರದಲ್ಲಿ ಚಿಕನ್ ಮಾರಾಟ ಇಲ್ಲ!