ಗ್ರಾಪಂ ಸದಸ್ಯರ ಸಭೆಯಲ್ಲಿ ನಿರ್ಧಾರ । ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರಕ್ಕೆ ಎಲ್ಇಡಿ ಟಿ.ವಿ ವ್ಯವಸ್ಥೆ
ಚಾಮರಾಜನಗರದ ಹಿಂದೂ ಮುಖಂಡರಿಂದ ಸೋಮವಾರ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಧ್ಯಾಹ್ನ ೧೨ ಗಂಟೆಗೆ ರಾಮೋತ್ಸವ, ಶ್ರೀರಾಮ ಕ್ಯಾಲೆಂಡರ್ ಬಿಡುಗಡೆ ಮತ್ತು ಜನರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ಶ್ರೀಕಂಠು, ಕೃಷ್ಣಕುಮಾರ್ ತಿಳಸಿದ್ದಾರೆ.
ಮಹಿಳೆಯರಿಂದ ಲಿಲಿತ ಸಹಸ್ರನಾಮ:ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಚಾಮರಾಜನಗರದದಲ್ಲಿ ಸೋಮವಾರ 400 ಕ್ಕೂ ಹೆಚ್ಚು ಮಹಿಳೆಯರಿಂದ ಲಿಲಿತ ಸಹಸ್ರನಾಮ ಏರ್ಪಡಿಸಲಾಗಿದೆ. ಶಂಕರಪುರ ರಾಮಮಂದಿರದಲ್ಲಿ ಶ್ರೀರಾಮತಾರಕ ಮಹಾಮಂತ್ರ ಜಪ ಸಾಂಗತ ಯಜ್ಞ ನಡೆಯಲಿದ್ದು, ಯಜ್ಞಕ್ಕಾಗಿ ರಾಮಮಂದಿರ ಆವರಣದಲ್ಲಿ ಯಾಗ ಮಂಟಪ ನಿರ್ಮಾಣ ಮಾಡಲಾಗಿದೆ. ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರದ ವೀಕ್ಷಣೆಗೆ ಬೃಹತ್ ಎಲ್ಇಡಿ ಟಿ.ವಿ ವ್ಯವಸ್ಥೆ ಮಾಡಲಾಗಿದೆ.ಲಾಡು ವಿತರಣೆ: ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಪಚ್ಚಪ್ಪ ಸರ್ಕಲ್ ಬಳಿ ಭಕ್ತಾದಿಗಳಿಗೆ ಲಾಡು ಹಾಗೂ ಸಿಹಿ ತಿನಿಸುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ತಿಳಿಸಿದ್ದಾರೆ.