ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮಿತಿಯ ಸದಸ್ಯರು, ಮಾಲಾಧಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾಮಿ ಅಯ್ಯಪ್ಪಗೆ ಹಾಲಿನ ಅಭಿಷೇಕ ಮಾಡಿ ಸಮಸ್ತ ಸದ್ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಸೇವಕ/ ಸೇವಕಿಯರು ಸೇರಿದ ನೂರಾರು ಅಯ್ಯಪ್ಪ ಭಕ್ತರಿಗೆ ಹಾಲುಗ್ಗಿ, ಅನ್ನ ಮತ್ತು ಸಾಂಬಾರು ಬಡಿಸಿದರು.
ದೇವಾಲಯ ನಿರ್ಮಾಣಕ್ಕೆ ಜಾಗ ಕಾಣಿಕೆ: ಮಹಾಲಿಂಗಪುರ ಪಟ್ಟಣದ ಬಾಟ್ ಪರಿವಾರ ಅಯ್ಯಪ್ಪ ದರ್ಶನಕ್ಕೆ ಶಬರಿಮಲೈಗೆ ಹೊರಟಿದ್ದ ವೇಳೆ ರಸ್ತೆ ಅಪಘಾತದಲ್ಲಿ ಅಸುನೀಗಿದ 5 ವರ್ಷದ ಮಾಲಾಧಾರಿ ಬಾಲಕ ರಾಹುಲ್ ಮೇತ್ರಿ ಹೆಸರಲ್ಲಿ ಬಾಲ ಅಯ್ಯಪ್ಪಸ್ವಾಮಿ ದೇಗುಲ ನಿರ್ಮಾಣಕ್ಕೆ ತಮ್ಮ ತೋಟದಲ್ಲಿ 5 ಗುಂಟೆ ಜಮೀನು ನೀಡಿದ್ದಾರೆ.