ಕನ್ನಡಪ್ರಭವಾರ್ತೆ ಹೊಸಕೋಟೆ
ನಗರದ ತಾಲೂಕು ಕಚೇರಿಯಲ್ಲಿ ಡಾ.ಬಾಬು ಜಗಜೀವನ್ ರಾಂರವರ 39ನೇ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಸಮಾನತೆ ತರುವಲ್ಲಿ ಹೋರಾಡಿದ ನಾಯಕರಾಗಿದ್ದು, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂರವರು ದೇಶದ ಎರಡು ಕಣ್ಣುಗಳಿದ್ದಂಗೆ, ಸಂವಿಧಾನ ಬರೆದ ಅಂಭೇಡ್ಕರ್ ಜೊತೆಗೆ ಬಾಬು ಜಗಜೀವನ್ ರಾಂ ಅವರು ಸಂವಿಧಾನದಡಿ ಸರ್ವ ಸಮಾನತೆಗೆ ಹೋರಾಟದ ಮೂಲಕ ಶ್ರಮಿಸಿದ ಮಹಾನ್ ನಾಯಕ ಎಂದರು.ಬಿಎಂಆರ್ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ಬಾಬು ಜಗಜೀವನ್ ರಾಂರವರು ೧೯೭೧ ರಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು, ದೇಶದಲ್ಲಿ ಶಾಂತಿ- ನೆಮ್ಮದಿ, ಸಮಾನತೆಗೆ ಹೋರಾಡಿದ್ದರು, ಅದರಂತೆ ಸಾರಿಗೆ ಸಚಿವ, ಕಾರ್ಮಿಕ ಸಚಿವ, ಕೃಷಿ ಸಚಿವರಾಗಿ ಅನೇಕ ಹುದ್ದೆ ಹೊಂದುವ ಮೂಲಕ ಸಮಾಜದಲ್ಲಿ ಅನೇಕ ಸುಧಾರಣೆ ತಂದಿದ್ದರು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜ್ ಮಾತನಾಡಿ, ನಾನು ಪಟ್ಟ ಕಷ್ಟ ನಮ್ಮ ಸಮುದಾಯ ಪಡಬಾರದು ಎಂಬ ಉದ್ದೇಶದಿಂದ ಆಹಾರ ಭದ್ರತೆ ಯೋಜನೆಯಲ್ಲಿ ಸ್ವಾಮಿನಾಥನ್ ರಿಗೆ ಮಾರ್ಗದರ್ಶನ ನೀಡಿ ಹಸಿರು ಕ್ರಾಂತಿ ಮೂಡಿಸಿದ ನಾಯಕ ಬಾಬೂಜೀ, ಅವರ ಆದರ್ಶಗಳನ್ನು ನಾವೆಲ್ಲಾ ಪಾಲಿಸಬೇಕು ಎಂದರು.