ಗದಗ: ಜಿಲ್ಲೆಯಾದ್ಯಂತ ಸೋಮವಾರ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಅವಳಿ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿಯೇ ಸೋಮವಾರ ಬೆಳಗ್ಗೆ ಬಕ್ರೀದ್ ವಿಶೇಷ ಪ್ರಾರ್ಥನೆಗಳು ಜರುಗಿದವು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಸರಫರಾಜ್ ಉಮಚಗಿ, ಉಮರ್ ಫಾರೂಕ್ ಹುಬ್ಬಳ್ಳಿ, ಸಾದಿಕ್ ನರಗುಂದ ಮುಂತಾದ ಮುಖಂಡರು ಒಂದೆಡೆ ಪ್ರಾರ್ಥನೆ ಸಲ್ಲಿಸಿದರು.
ಶಾಹಿ ಈದ್ಗಾದಲ್ಲಿ ಸಿರಾಜ್ ಬಳ್ಳಾರಿ, ಜಾಕೀರ ಮುಜಾವರ, ಅಸ್ಲಂ ನರೇಗಲ್ಲ, ಬಿ.ಎಂ. ಕುಕನೂರ, ಜಹೀರ ತಾಡಪತ್ರಿ ಪಾಲ್ಗೊಂಡಿದ್ದರು. ಬೆಟಗೇರಿ ಈದ್ಗಾದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ, ಮಹ್ಮದ ಹನೀಫ್ ಶಾಲಗಾರ, ಅನ್ವರ ಈಟಿ, ಸಲಾಂ ಬಳ್ಳಾರಿ, ಫಯಾಜ್ ನಾರಾಯಣಕೇರಿ, ಎಂ.ಆರ್. ಅಣ್ಣಿಗೇರಿ, ಬಾಬುಸಾಬ ನಾರಾಯಣಕೇರಿ, ಅಲಿ ಹೊಂಬಳ ಮುಂತಾದವರು ಪಾಲ್ಗೊಂಡಿದ್ದರು.ಪ್ರಾರ್ಥನೆ: ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ವಿವಿಧ ಮಸೀದಿಗಳಲ್ಲಿ ಹಾಗೂ ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹ ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಬಳಿಕ ಪರಸ್ಪರ ಶುಭಾಷಯ ಕೋರಿದರು.ಮುಂಡರಗಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಮುಂಡರಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಮೆಹಬೂಬಸಾಬ್ ಹವಾಲ್ದಾರ್, ಎಸ್.ಡಿ. ಮಕಾಂದಾರ, ನಬೀಸಾಬ್ ಕೆಲೂರು, ಡಿ.ಎಂ. ನಾಗರಹಳ್ಳಿ, ಆರ್.ಎಂ. ಸೈದರ್, ರಾಜೇಸಾಬ್ ತಪ್ಪಡಿ, ದಸ್ತಗೀರ್ ಸಾಬ್, ಎಂ.ಜಿ. ವಡ್ಡಟ್ಟಿ, ರಾಜಾಭಕ್ಷಿ ಬೆಟಗೇರಿ, ಮಹ್ಮದ ರಫೀಕ್ ಮುಲ್ಲಾ, ಎ.ಪಿ. ದಂಡಿನ, ಎ.ಕೆ. ಮುಲ್ಲಾನವರ, ಎಂ.ಎಚ್. ಬೆಟಗೇರಿ, ಅಮೀನಸಾಬ್ ಬಿಸನಳ್ಳಿ, ಬಾಬಾಜಾನ್ ಗದಗ, ಕಬಲಾಸಾಬ್ ಆಲೂರು, ಫಕ್ರುಸಾಬ್ ಹಾರೋಗೇರಿ, ಅಬ್ದುಲ್ ಖುರೇಶಿ, ಡಿ.ಎಂ. ಕಾತರಕಿ, ಅಲ್ಲಾವುದ್ದೀನ್ ಬನ್ನಿಗೋಳ, ಎಂ.ಬಿ. ತಾಂಬೋಟಿ, ಅನ್ವರ್ ಸಾಬ್ ಹಣಗಿ, ಮೌಲಾಸಾಬ್ ಬಾಗವಾನ್ ಉಪಸ್ಥಿತರಿದ್ದರು.