ಕನ್ನಡಪ್ರಭ ವಾರ್ತೆ ರಾಮನಗರ
ಬಾಕ್ಸ್ಪರಸ್ಪರ ಶುಭಾಷಯ ವಿನಿಮಯ
ಮಾಗಡಿ: ಪಟ್ಟಣದ ಹೊಸಪೇಟೆ, ಹೊಂಬಾಳಮ್ಮನಪೇಟೆ, ಹಳೆಮಸೀದಿ ಮತ್ತು ಹೊಸ ಮಸೀದಿ ಮೊಹಲ್ಲಾಗಳಿಂದ ಮೆರವಣಿಗೆಯಲ್ಲಿ ಕಲ್ಯಾ ಬಾಗಿಲಿಗೆ ತೆರಳಿ, ಬಿ.ಕೆ.ರಸ್ತೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಪುಟಾಣಿಗಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.ಪಟ್ಟಣದ ಹಳೆ ಮತ್ತು ಹೊಸ ಮಸೀದಿಯಲ್ಲಿ ಸೌಹಾರ್ದದ ಭೋಜನ ಕೂಟಗಳು ನಡೆದವು. ಜಮಾಲ್ ಸಾಬ್ ಪಾಳ್ಯ, ಅಗಲಕೋಟೆ, ಮತ್ತಿಕೆರೆ, ಹೊಸಪಾಳ್ಯ, ತಿಪ್ಪಸಂದ್ರ, ಹಳೆಲಾಯ, ಹೊಸಲಾಯ, ಹುಳ್ಳೇನ ಹಳ್ಳಿ, ಮಾಯಸಂದ್ರ, ಕುದೂರು, ಗೊಲ್ಲರ ಪಾಳ್ಯ, ಸಂಕೀಘಟ್ಟ,ಬಿಸ್ಕೂರು, ತೊರೆರಾಮನ ಹಳ್ಳಿ, ಸೋಲೂರು, ಗುಡೇಮಾರನ ಹಳ್ಳಿ, ಮಟ್ಟನ ದೊಡ್ಡಿ, ಮಾರೇಗೌಡನ ದೊಡ್ಡಿ, ಮಾಡಬಾಳ್ ಇತರೆಡೆಗಳಲ್ಲಿ ನೆಲೆಸಿರುವ ಮುಸ್ಲಿಮರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಆಚರಿಸಿದರು...........................ಬಾಕ್ಸ್
ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಚನ್ನಪಟ್ಟಣ: ಪಟ್ಟಣದ ಕೋಟೆ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆಯಿಂದಲೇ ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಬಂದ ಮುಸ್ಲಿಂ ಸಮುದಾಯದವರು ಧರ್ಮಗುರುಗಳ ಉಪದೇಶದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಉಪನ್ಯಾಸ ನೀಡಿದರು. ಪ್ರಾರ್ಥನೆ ನಂತರ ಮುಸ್ಲಿಂರು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.ತಾಲೂಕಿನ ಹೊಂಗನೂರು, ಕೋಡಂಬಹಳ್ಳಿ, ಮಹಮದ್ಖಾನ್ ದೊಡ್ಡಿಗಳಲ್ಲೂ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು...........................ಬಾಕ್ಸ್
ಶ್ರದ್ಧಾ ಭಕ್ತಿಯಿಂದ ಆಚರಣೆಕನಕಪುರ: ಪವಿತ್ರ ಬಕ್ರೀದ್ ಹಬ್ಬವನ್ನು ಕನಕಪುರದಲ್ಲಿ ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಕನಕಪುರದ ನಾನಾ ಭಾಗಗಳಲ್ಲಿನ ಮಸೀದಿಗಳಿಂದ ಮೆರವಣಿಗೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದರು.
ಇಲ್ಲಿನ ನಮಾಜಿ ಬೋರೆಯ ಈದ್ಗಾ ಪ್ರದೇಶದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಪ್ರಧಾನ ಇಮಾಂ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಕೋರಿದರು.7ಕೆಆರ್ ಎಂಎನ್ 2.ಜೆಪಿಜಿರಾಮನಗರದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಿರುವುದು.