ಸಿಸಿ ರಸ್ತೆ ಕಾಮಗಾರಿ ತಡೆಯಾಜ್ಞೆ ತೆರವುಗೊಳಿಸಿ

KannadaprabhaNewsNetwork | Published : Jun 8, 2025 1:36 AM
ಗಂಗಾವತಿಯಿಂದ ಸಿದ್ದಿಕೇರಿ-ಬಸಾಪಟ್ಟಣ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಕಾಮಗಾರಿಗೆ ಕೆಲವರು ತಡೆಯಾಜ್ಞೆ ತಂದಿದ್ದು ಕೂಡಲೆ ರದ್ದುಪಡಿಸಿ ಕಾಮಗಾರಿ ಪ್ರಾರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗಂಗಾವತಿ:

ಗಂಗಾವತಿಯಿಂದ ಸಿದ್ದಿಕೇರಿ-ಬಸಾಪಟ್ಟಣ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಕಾಮಗಾರಿಗೆ ಕೆಲವರು ತಡೆಯಾಜ್ಞೆ ತಂದಿದ್ದು ಕೂಡಲೆ ರದ್ದುಪಡಿಸಿ ಕಾಮಗಾರಿ ಪ್ರಾರಂಭಿಸುವಂತೆ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಅರ್ಜುನ ನಾಯಕ, ಸಿಸಿ ರಸ್ತೆಯು ಸಿದ್ದೀಕೇರಿ ಕ್ಯಾಂಪ್, ಕಲ್ಲಪ್ಪನ ಕ್ಯಾಂಪ್, ಕರೇಕಲ್ ಕ್ಯಾಂಪ್, ಹೊಸಮಲ್ಲಿ ಕ್ಯಾಂಪ್, ಸೂರ್ಯನಾಯಕನ ತಾಂಡ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಹಾಗೂ ಜಮೀನುಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಸರ್ಕಾರದ ಎಸ್‌ಟಿ ಅನುದಾನದಿಂದ ಈ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದೆ. ಆದರೆ, ಸರ್ವೇ ನಂ. 239ರ ಮಾಲೀಕ ಗಿರೀಶ ಗಾಯಕವಾಡ ಅವರು ಈ ಸಿಸಿ ರಸ್ತೆ ತಮ್ಮ ಹೊಲದಲ್ಲಿ ಬರುತ್ತದೆ ಎಂದು ಕಾಮಗಾರಿಗೆ ತಕರಾರು ತೆಗೆದಿದ್ದಾರೆ. ನಿಮ್ಮ ಹೊಲದಲ್ಲಿ ಬರುವುದಿಲ್ಲವೆಂದು ಗುತ್ತಿಗೆದಾರರು, ಸ್ಥಳೀಯರು ಹೇಳಿದರೂ ಸಹ ಅವರು ಈ ರಸ್ತೆ ಕಾಮಗಾರಿಗೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.

ರಸ್ತೆ ಕಾಮಗಾರಿ ಮಾಡದೆ ಇರುವುದರಿಂದ ನಿತ್ಯ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು.ದುರುಗಪ್ಪ ನಾಯಕ ದಳಪತಿ ಮಾತನಾಡಿ, ಸಿಸಿ ರಸ್ತೆ ಕಾಮಗಾರಿ ಪುನರ್ ಪರಿಶೀಲಿಸಿ ತಡೆಯಾಜ್ಞೆ ರದ್ದುಗೊಳಿಸಿ ಕಾಮಗಾರಿಗೆ ಚಾಲನೆ ನೀಡಬೇಕೆಂದು ಆಗ್ರಹಿಸಿದರುಈ ವೇಳೆ ಮಂಜುನಾಥ ನಾಯಕ ಮಳ್ಳಿಕೇರಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಜೋಗದ ವಸಂತ ನಾಯಕ, ಬಿ. ರಾಮುಲು, ಹೊಸಮಲ್ಲಿ ರಮೇಶ ನಾಯಕ, ಭಾಗಣ್ಣ, ಹತ್ತಿಮರದ ಭಾಗ್ಯವಂತ ನಾಯಕ, ಮಂಜುನಾಥ ನಾಯಕ ಕೋಲ್ಕಾರ, ಹರೀಶ ನಾಯಕ ಸಿದ್ದಿಕೇರಿ, ರವಿ ಗುಡ್ಡೇಕಲ್, ರವಿನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.