ಕೊಪ್ಪಳ: ಬಸವಣ್ಣ ಕೇವಲ ಕನ್ನಡ ನಾಡಿನ ಸಾಂಸ್ಕೃತಿ ನಾಯಕ ಅಲ್ಲ, ಈಗಲಾದರೂ ರಾಜ್ಯ ಸರ್ಕಾರ ಮನಸ್ಸು ಮಾಡಿರುವುದು ಶ್ಲಾಘನೀಯ. ಇಂದಲ್ಲ, ನಾಳೆ ಬಸವಣ್ಣ ಅವರನ್ನು ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಿಯೇ ಮಾಡುತ್ತಾರೆ ಎಂದು ಬಸವ ಚಿಂತಕಿ ಗಂಗಾಂಬಿಕೆ ಹೇಳಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಚಿಗರಹಳ್ಳಿ ಮರಳಶಂಕರದೇವರಮಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಬಸವ ಚಿಂತಕಿ ಗಂಗಾಂಬಿಕಾ ಇದ್ದರು.ಜೂ. 16ರಂದು ಲಿಂಗಾಯತ ಜಾಗೃತ ಸಮಾವೇಶ: ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ನಲ್ಲಿ ಜೂ. 16ರಂದು ಬೆಳಗ್ಗೆ 11 ಗಂಟೆಗೆ ಜಾಗತಿಕ ಲಿಂಗಾಯತ ಮಹಾಸಭೆಯ ಜಾಗ್ರತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಗವಿಸಿದ್ದಪ್ಪ ಕೊಪ್ಪಳ ಅವರು ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬಸವ ಪರ ಒಕ್ಕೂಟಗಳು ಮತ್ತು ಲಿಂಗಾಯತ ಒಕ್ಕೂಟಗಳು ಒಂದಗೂಡಿ ಜಾಗ್ರತ ಸಮಾವೇಶ ಹಮ್ಮಿಕೊಂಡಿದೆ. ಲಿಂಗಾಯತರ ಸ್ಥಿತಿಗತಿ ಮತ್ತು ಸ್ಥಾನಮಾನದ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ, ಬಸವ ಸಮಿತಿ ಅಧ್ಯಕ್ಷ ಅರುಣ ಜತ್ತಿ, ವೈಚಾರಿಕ ಕ್ರಾಂತಿಯ ಮೀನಾಕ್ಷಿ ಬಾಳಿ ಭಾಗವಹಿಸಲಿದ್ದಾರೆ.ಬಸವ ಕಾರುಣ್ಯ ಪ್ರಶಸ್ತಿ: ಜಿಪಂ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ ತೊದಲಬಾಗಿ, ವ್ಯಾಪಾರಿ ರಾಮಣ್ಣ ಸಿಗನಳ್ಳಿ ಹಾಗೂ ಗಾಳೆಮ್ಮ ಕಿಡದಾಳ ಅವರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ, ಗೌರವಿಸಲಾಯಿತು.ಏಳುನೂರಕ್ಕೂ ಹೆಚ್ಚು ಅಮರಗಣಂಗಳ: ಬಸವ ಜಯಂತಿ ನಿಮಿತ್ತ ಬಸವ ಸಮಿತಿ ಹೊರತಂದಿರುವ ಅಮಂತ್ರಣ ಪತ್ರಿಕೆಯೂ ವಿಶೇಷವಾಗಿದೆ. ಕೇವಲ ಅದೊಂದು ಅಮಂತ್ರಣ ಪತ್ರಿಕೆಯಾಗಿರದೆ ಹೊತ್ತಿಗೆಯ ರೂಪದಲ್ಲಿ ತರಲಾಗಿದೆ. ಜಗತ್ತಿನಾದ್ಯಂತ ಗಣ್ಯರು ಬಸವಣ್ಣ ಅವರನ್ನು ಬಣ್ಣಿಸಿದ ಪರಿಯನ್ನು ದಾಖಲಿಸಲಾಗಿದೆ. ಇದಕ್ಕಿಂತ ವಿಶೇಷವಾಗಿ ಬಸವಯುಗದ ಶರಣ-ಶರಣೆಯರು ಹಾಗೂ ಕಾಯಕಜೀವಿಗಳ 700ಕ್ಕೂ ಹೆಚ್ಚು ಅಮರಗಣಂಗಳನ್ನು ಮುದ್ರಿಸಲಾಗಿದ್ದು, ಸಂಗ್ರಹಿಸಿಟ್ಟುಕೊಳ್ಳಬಹುದಾದ ಹೊತ್ತಿಗೆ ರೂಪದ ಅಮಂತ್ರಣ ಪತ್ರಿಕೆಯಾಗಿದೆ.ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು. ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು.