ಬಸವಣ್ಣನವರ ವಚನಗಳು ದಾರಿದೀಪ: ಸದಾನಂದ: ಸದಾನಂದ ಹೆಗಡೆ

KannadaprabhaNewsNetwork |  
Published : May 02, 2025, 12:09 AM IST
30ಕೆಡಿವಿಜಿ6, 7-ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಬುಧವಾರ ನಡೆದ ಬಸವ ಜಯಂತಿಯಲ್ಲಿ ಕೂಟದ ಉಪಾಧ್ಯಕ್ಷ ಸದಾನಂದ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಜಿಲ್ಲಾ ವರದಿಗಾರರ ಕೂಟದಿಂದ ಆಚರಿಸಲಾಯಿತು.

ದಾವಣಗೆರೆ: ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಜಿಲ್ಲಾ ವರದಿಗಾರರ ಕೂಟದಿಂದ ಆಚರಿಸಲಾಯಿತು.

ನಗರದ ವರದಿಗಾರರ ಕೂಟದಲ್ಲಿ ನಡೆದ ಸಮಾರಂಭದಲ್ಲಿ ಕೂಟದ ಹಿರಿಯ ಉಪಾಧ್ಯಕ್ಷ ಸದಾನಂದ ಹೆಗಡೆ ಸಮಾರಂಭ ಉದ್ಘಾಟಿಸಿ, ಇಡೀ ಮಾನವ ಕುಲಕ್ಕೆ ಬಸವಾದಿ ಶರಣ-ಶರಣೆಯರು ನೀಡಿರುವ ವಚನಗಳು ದಾರಿ ದೀಪವಾಗಿವೆ ಎಂದರು.

ಹಿರಿಯ ಪತ್ರಕರ್ತ ದೇವೇಂದ್ರಪ್ಪ ಮಾತನಾಡಿ, ಜಾತಿ ವ್ಯವಸ್ಥೆಯ ವಿರುದ್ಧ ಬಸವಾದಿ ಶರಣ-ಶರಣೆಯರು ಧ್ವನಿ ಎತ್ತಿದ್ದರು. ಸಮಾನತೆ ತರಲು, ಮೇಲು-ಕೀಳೆಂಬ ತಾರತಮ್ಯ ನಿವಾರಣೆಗಾಗಿ ಬಸವಣ್ಣವರು ಅಂತರ್ಜಾತಿ ವಿವಾಹಕ್ಕೆ ಮುಂದಾದರು ಎಂದರು.

ಭೋವಿ ಸಮಾಜದ ಡಿ.ಬಸವರಾಜ ಮಾತನಾಡಿ, ನಾವೆಲ್ಲರೂ ಬಸವಾದಿ ಶರಣ-ಶರಣೆಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಕರೆ ನೀಡಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿದರು. ಕೂಟದ ಹಿರಿಯರಾದ ಆರ್.ಎಸ್.‌ ತಿಪ್ಪೇಸ್ವಾಮಿ, ಆರ್.ರವಿಬಾಬು, ದೇವಿಕಾ ಸುನಿಲ್‌, ಪಿ.ಎಸ್.ಲೋಕೇಶ, ರಮೇಶ, ರಾಮಮೂರ್ತಿ, ಪುನೀತ್ ಆಪ್ತಿ, ನಿಂಗಪ್ಪ, ಅನಿಲಕುಮಾರ್ ವಿ.ಭಾವಿ, ರವಿ ಭುವನೇಶ್ವರಿ, ಭಾಸ್ಕರ, ಭೋವಿ ಸಮಾಜದ ಮುಖಂಡರಾದ ಎಚ್.ಚಂದ್ರಪ್ಪ, ಎಚ್.ಮಂಜುನಾಥ, ಎಸ್.ಜಿ.ಸೋಮಶೇಖರ, ಮಂಜುನಾಥ, ಎಚ್.ಬಸವರಾಜ, ಬಿ.ಚೌಡೇಶ, ಗಿರಿಧರ ಸಾತಾಲ್, ಡಿ.ಶಿವಕುಮಾರ, ಗಣೇ ಶ, ಬಿ.ಎಚ್.ಉದಯಕುಮಾರ, ಬಿ.ಎಸ್.ಸುರೇಶ, ನೇರ್ಲಿಗೆ ಎಸ್.ಡಿ.ರಾಜೇಶ, ಸಿ.ರಮೇಶ, ಗಿರಿಧರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!