ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಚ್ಚರ ವಹಿಸಿ

KannadaprabhaNewsNetwork |  
Published : Jun 19, 2026, 02:15 AM IST
18ಕೆಪಿಎಲ್5:ಕೊಪ್ಪಳ ಬಳಿಯ   ಭಾಗ್ಯನಗರದ ವಿಜಯನಗರ ಕಾಲೋನಿಯಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.  | Kannada Prabha

ಸಾರಾಂಶ

ಮಕ್ಕಳ ನಡುವೆ ಎಂತಹದ್ದೇ ಕಾರಣಕ್ಕೂ ತಾರತಮ್ಯ ಮಾಡದಂತೆ ಹಾಗೂ ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಲ್ಲ ವಯಸ್ಕರು ಎಚ್ಚರ ವಹಿಸಬೇಕು.

ಕೊಪ್ಪಳ: ಮಕ್ಕಳಲ್ಲಿ ಕೀಳರಿಮೆ ಉಂಟು ಮಾಡದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಶಿವಲೀಲಾ ವನ್ನೂರು ಹೇಳಿದರು.

ಸಮೀಪದ ಭಾಗ್ಯನಗರದ ವಿಜಯನಗರ ಕಾಲನಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಮಕ್ಕಳ ಹಕ್ಕು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜರುಗಿದ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳೆಂದರೆ ಹೆಣ್ಣಿರಲಿ ಗಂಡು ಇರಲಿ 18 ವರ್ಷದೊಳಗಿನವರನ್ನು ನಾವು ಮಕ್ಕಳೆಂದು ಕರೆಯುತ್ತೇವೆ. ಮಕ್ಕಳ ನಡುವೆ ಎಂತಹದ್ದೇ ಕಾರಣಕ್ಕೂ ತಾರತಮ್ಯ ಮಾಡದಂತೆ ಹಾಗೂ ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಲ್ಲ ವಯಸ್ಕರು ಎಚ್ಚರ ವಹಿಸಬೇಕು. ಹುಟ್ಟಿದ ಎಲ್ಲ ಮಕ್ಕಳು ಆರೋಗ್ಯದಿಂದ ಜೀವಿಸುವ ಮತ್ತು ಬೆಳೆಯುವ ಹಕ್ಕನ್ನು ಸ್ವಾಭಾವಿಕವಾಗಿ ಹೊಂದಿದ್ದಾರೆ. ಹಿರಿಯರು ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಪ್ರತಿಯೊಂದು ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಮಕ್ಕಳು ಮತ್ತು ಮಹಿಳೆಯರು ಭಿಕ್ಷಾಟನೆಗೆ ತೆರಳದಂತೆ ಕುಟುಂಬ ಹಾಗೂ ಸ್ಥಳಿಕರು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದಿಂದ ಮಹಿಳೆಯರಿಗಾಗಿ ದೊರೆಯುವಂತಹ ಉದ್ಯೋಗಿನಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳ ಲಾಭ ಪಡೆದುಕೊಂಡು ವಿವಿಧ ಕೌಶಲ್ಯ ಕಲಿತು ವ್ಯಾಪಾರ ಮಾಡುವ ನಿಟ್ಟಿನಲ್ಲಿ ಸ್ವಾಲಂಬಿ ಬದುಕು ಮಾಡಬೇಕು.ಮಕ್ಕಳಿಗೆ ಇರುವಂತಹ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು. ತಂದೆ-ತಾಯಿ ತೀರಿದ ಮಗು ಪೋಷಕರೊಂದಿಗೆ ವಾಸವಾಗಿದ್ದು ಶಾಲೆಗೆ ಹೋಗುತ್ತಿದ್ದರೆ ಅಂತಹ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಪ್ರಾಯೋಜಿಕತ್ವ ಯೋಜನೆ ಸೌಲಭ್ಯ ಪಡೆದು ಆರ್ಥಿಕವಾಗಿ ಸಂಕಷ್ಟದಿಂದ ದೂರವಾಗುವಂತೆ ಅನುಕೂಲತೆ ಪಡೆಯಬೇಕು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012 ರಲ್ಲಿ ಜಾರಿಗೆ ಬಂದಿದ್ದು, ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದರೆ ಮತ್ತು ಮಕ್ಕಳ ದೇಹದ ಮೇಲೆ ಅಸುರಕ್ಷತ ಸ್ಪರ್ಶ ಮಾಡಿದರೆ ಘಟನೆಯ ಸ್ವರೂಪದ ಆಧಾರದ ಮೇಲೆ 20 ರಿಂದ ಜೀವಾವಧಿ ಮತ್ತು ಗಲ್ಲು ಶಿಕ್ಷೆ ಸಹ ವಿಧಿಸಬಹುದು ಎಂದರು.

ಅಕ್ಕಪಡೆ ಪೊಲೀಸ್ ಅಧಿಕಾರಿ ಸಾವಿತ್ರಿ ಡಿ. ಮಾತನಾಡಿ, ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ, ಬಸ್‌ನಿಲ್ದಾಣ, ದೇವಸ್ಥಾನ, ಸಿನಿಮಾ ಟಾಕೀಜ್, ಪ್ರವಾಸಿ ತಾಣ, ಮಾಲ್‌, ಬೀದಿ, ಶಾಲಾ ಕಾಲೇಜ್‌ ಮತ್ತು ಕುಟುಂಬ ಹಾಗೂ ಸಮುದಾಯಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೈಹಿಕ, ಲೈಂಗಿಕ, ಮಾನಸಿಕ ಹಿಂಸೆಗಳು ಏನಾದರು ಯಾವುದೇ ವ್ಯಕ್ತಿ ನೀಡಿದಲ್ಲಿ ಅಕ್ಕಪಡೆಯ ಸಂಖ್ಯೆ 181ಗೆ ಕರೆ ಮಾಹಿತಿ ನೀಡಿದರೆ ಆ ಸ್ಥಳಕ್ಕೆ ಅಕ್ಕಪಡೆಯ ತಂಡ ರಕ್ಷಣೆಗಾಗಿ ಧಾವಿಸುತ್ತದೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ತುರ್ತು ಪೊಲೀಸ್ ಉಚಿತ ಸಹಾಯವಾಣಿ ಸಂಖ್ಯೆ 112 ಗೂ ಸಹ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕ, ಮಕ್ಕಳ ಭಿಕ್ಷಾಟನೆ ಲೈಂಗಿಕ ದೌರ್ಜನ್ಯ, ಕಾಣಿಯಾದ ಮಗು, ಮಗುಪತ್ತೆ, ಬಿದಿಯಲ್ಲಿ ಬಿಸಾಕಿದ ಮಗು, ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದಲ್ಲಿ ದಿನದ 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಉಚಿತ ದೂರವಾಣಿ ಸಂಖ್ಯೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಟ್ಟು ಮಗುವಿನ ರಕ್ಷಣೆ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಾಗರತ್ನ ಮತ್ತು ಚೈತ್ರ, ಶರಣಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಾಹಿತ್ಯಕ್ಕೆ ಡಾ.ಸಿದ್ದಯ್ಯ ಪುರಾಣಿಕರ ದೊಡ್ಡ ಕೊಡುಗೆ ಅಪಾರ
ಶಾಲಾ ಕಟ್ಟಡದಿಂದ ಬಿದ್ದು 10 ವರ್ಷದ ಬಾಲಕ ಸಾವು