ಸಿರಿಗೆರೆ: ಬೆಳೆಯುತ್ತಿರುವ ತಂತ್ರಜ್ಞಾನದ ಕಡೆಗೆ ಎಲ್ಲರ ಆಸಕ್ತಿ ಹೋಗಿದ್ದರಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭಾಷೆ ಹರಿಯುವ ನೀರಿದ್ದಂತೆ. ಅದನ್ನು ಯಾರೂ ಮಲಿನಗೊಳಿಸಬಾರದು. ಈಗಿನ ಯುವಕರು ಇಂಗ್ಲಿಷ್ ಭಾಷೆಗೆ ಮಾರು ಹೋಗಿದ್ದಾರೆ. ಕನ್ನಡ ಮಾತಾಡುವ ಸಂದರ್ಭ ಬಂದಾಗ ಅವರು ಪರಿಪೂರ್ಣ ಕನ್ನಡ ಭಾಷೆಯನ್ನು ಬಳೆಸಬೇಕು. ಕನ್ನಡದಲ್ಲಿ ಅನ್ಯ ಭಾಷೆಗಳ ಮಿಶ್ರಣ ಮಾಡಬಾರದು. ಅಪ್ಪಟ ಕನ್ನಡ ಮಾತಾಡಿ, ಕನ್ನಡವನ್ನು ಬೆಳೆಸಿ ಎಂದು ತಿಳಿಸಿದರು.ಸಂಸ್ಕೃತದಲ್ಲಿ ನುಡಿಗಟ್ಟುಗಳನ್ನು ಬಳಸಿ ಕವಿತೆ ಕಟ್ಟುವ ಸಂಪ್ರದಾಯವಿದೆ. ಇದರಿಂದ ಭಾಷೆಯ ಬೆಳವಣಿಗೆ ಆಗುತ್ತದೆ ಎಂದರು.