ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಜ್ಞಾನ ಸುಧಾ ಸ್ಕಾಲರ್ಶಿಪ್ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ವಿತರಣೆಗೆ ಚಾಲನೆ
ವಿದ್ಯಾರ್ಥಿಗಳು ತಾವು ಕಂಡ ಕನಸು ನನಸಾಗಿಸಲು ನಿರಂತರ ಪರಿಶ್ರಮ ಮತ್ತು ಶಿಸ್ತಿನ ದಿನಚರಿಯನ್ನು ಯಶಸ್ಸಿನ ಆಧಾರವಾಗಿ ಅಳವಡಿಸಿಕೊಳ್ಳಬೇಕು. ಯಶಸ್ಸಿಗಿಂತ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯವಾಗಿದ್ದು, ಪೋಷಕರಿಗೆ ಗೌರವ, ಪ್ರೀತಿ ಮತ್ತು ಸಮಯ ನೀಡಬೇಕು ಎಂದು ಸಂಸದ ಡಾ.ಕೆ. ಸುಧಾಕರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಮಂಚೇನಹಳ್ಳಿ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಜ್ಞಾನ ಸುಧಾ ಸ್ಕಾಲರ್ಶಿಪ್ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಒಂದು ಪುಟ ಓದುವ ಅಭ್ಯಾಸ ಆರಂಭಿಸಬೇಕು. ಪಠ್ಯಪುಸ್ತಕಗಳಷ್ಟೇ ಅಲ್ಲದೆ ಪತ್ರಿಕೆ, ಕಾದಂಬರಿ, ಕಥೆ ಅಥವಾ ಇತಿಹಾಸದ ಪುಸ್ತಕಗಳಿಂದಲೂ ಓದಬಹುದು. ಎಲಾನ್ ಮಸ್ಕ್, ಅಂಬಾನಿ ಮತ್ತು ಬಿಲ್ ಗೇಟ್ಸ್ರನ್ನು ಉದಾಹರಿಸಿ, ಯಶಸ್ವಿ ವ್ಯಕ್ತಿಗಳ ಗುಟ್ಟಿನಲ್ಲಿ ಓದುವ ಅಭ್ಯಾಸ ಪ್ರಮುಖವಾಗಿದೆ. ಇತರರೊಂದಿಗೆ ಹೋಲಿಕೆ ಮಾಡುವ ಬದಲು ನಿನ್ನೆಗಿಂತ ಇಂದು ಉತ್ತಮವಾಗಲು ಮತ್ತು ಇಂದಿಗಿಂತ ನಾಳೆ ಉತ್ತಮವಾಗಲು ಪ್ರಯತ್ನಿಸಬೇಕು. 2047ರ ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಮಾನವೀಯತೆ ಮತ್ತು ತಂತ್ರಜ್ಞಾನವನ್ನು ಸಮನ್ವಯಗೊಳಿಸಬೇಕು ಎಂದರು.ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ:
ತ್ಯಾಗ ಮತ್ತು ಪರಿಶ್ರಮ:
ಶಿಸ್ತು ಮತ್ತು ದಿನಚರಿಯೇ ಫಲಿತಾಂಶದ ಮೂಲ:
ಸಾಮಾಜಿಕ ಮಾಧ್ಯಮದ ಅಲ್ಗೋರಿದಮ್ ಬಳಕೆದಾರರ ಆಸಕ್ತಿಗೆ ತಕ್ಕಂತೆ ಒಂದೇ ರೀತಿಯ ವೀಡಿಯೊಗಳನ್ನು ನಿರಂತರವಾಗಿ ತೋರಿಸುತ್ತದೆ, ಇದರಿಂದ ಬಳಕೆದಾರರು ಅದರ ಪ್ರಭಾವಕ್ಕೆ ಒಳಗಾಗುತ್ತಾರೆ. ಪ್ರೇರಣಾತ್ಮಕ ವೀಡಿಯೊಗಳನ್ನು ನೋಡುವುದಷ್ಟೇ ಸಾಕಾಗುವುದಿಲ್ಲ, ಸ್ವಯಂಪ್ರೇರಣೆ, ಬೆಳಗಿನ ನಿಯಮಿತ ಜೀವನ, ಅಲಾರಂ ನಂತರ ಎದ್ದು ಕಾರ್ಯಪ್ರವೃತ್ತರಾಗುವ ಅಭ್ಯಾಸ ಮತ್ತು ನಿರಂತರ ಶಿಸ್ತು ಅಗತ್ಯವೆಂದು ತಿಳಿ ಹೇಳಿದರು.
ಶ್ರೀಮಂತಿಕೆ, ದೊಡ್ಡ ಹುದ್ದೆ ಮತ್ತು ಅಧಿಕಾರ ಮುಖ್ಯವಾದರೂ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಅದಕ್ಕಿಂತ ಮಹತ್ವದ್ದು.“ಮೋರ್ ದನ್ ಸಕ್ಸಸ್ , ಹೌಯೂಸ್ ಫುಲ್ ” ಎಂಬ ತತ್ವವನ್ನು ಜೀವನದ ಮಾರ್ಗದರ್ಶಕವಾಗಿ ನೀಡಿ, ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಸಾಮರ್ಥ್ಯವಿದ್ದರೂ ಅದನ್ನು ಬಳಸುವುದು ಅರ್ಥಪೂರ್ಣ ಜೀವನದ ಆರಂಭವೆಂದು ವಿವರಿಸಿ, ಕೆಟ್ಟ ವಸತಿ ಸೌಲಭ್ಯಗಳ ಸಮಸ್ಯೆಯನ್ನು ಗಮನಿಸಿ ರಿತೇಶ್ ಅಗರ್ವಾಲ್ ಮತ್ತು ಅವರ ಇಬ್ಬರು ಸ್ನೇಹಿತರು ಓಯೋ ಕಂಪನಿಯನ್ನು ಸ್ಥಾಪಿಸಿದ ಉದಾಹರಣೆಯ ಮೂಲಕ ಸಮಸ್ಯೆಗಳನ್ನು ಅವಕಾಶಗಳಾಗಿ ಪರಿವರ್ತಿಸಬಹುದು ಎಂಬುದನ್ನು ತಿಳಿಸಿದರಲ್ಲದೇ, ಸಮಸ್ಯೆ ಪರಿಹಾರದಿಂದ ಉದ್ಯಮ, ಉದ್ಯೋಗ ಸೃಷ್ಟಿ ಮತ್ತು ಸಮಾಜದ ಅಭಿವೃದ್ಧಿಗೆ ದಾರಿ ತೆರೆಯಬಹುದು ಎಂಬ ಉದ್ಯಮಶೀಲತೆಯ ಸಂದೇಶ ನೀಡಿದರು.
2047ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ 100 ವರ್ಷಗಳು ತುಂಬುವಾಗ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಹೊಣೆಗಾರಿಕೆ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಕೃತಕ ಬುದ್ದಿ ಮೆತ್ತೆ ಮತ್ತು ಯಾಂತ್ರಿಕ ಕಲೀಕಾಕರಣ, ರೋಬೋಟ್ಸ್ ಮತ್ತು ಹೊಸ ತಂತ್ರಜ್ಞಾನಗಳು ಬೆಳೆಯುತ್ತಿದ್ದರೂ ಮಾನವನ ಆಲೋಚನಾ ಶಕ್ತಿ ಮತ್ತು ಮಾನವೀಯ ಗುಣಗಳನ್ನು ಯಂತ್ರಗಳು ಸಂಪೂರ್ಣವಾಗಿ ಬದಲಾಯಿಸಲಾರವು.
ಈ ವೇಳೆ ಸ್ಥಳೀಯ ಮುಖಂಡರು, ಪೋಷಕರು, ಶಿಕ್ಷಕರು, ಬಂಧುಗಳು ಇದ್ದರು.
ಸಿಕೆಬಿ-6 ಮಂಚೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಚೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಜ್ಞಾನ ಸುಧಾ ಸ್ಕಾಲಶಿಫ್ ಯೋಜನೆಯಡಿ ತಲಾ 5 ಸಾವಿರ ರು.ಗಳ ಚೆಕ್ ಅನ್ನು ಸಂಸದ ಡಾ.ಕೆ.ಸುಧಾಕರ್ ವಿತರಿಸಿದರು.