ದೇವನಹಳ್ಳಿ: ಪೋಷಕರು ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಮುನ್ನ ಒಮ್ಮೆ ಕಣ್ಣು ಪರೀಕ್ಷೆ ಮಾಡಿಸಬೇಕು ಎಂದು ಡಾ. ಪಿ.ಎನ್.ದಿನೇಶ್ ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೃಷ್ಣಪ್ಪಗೌಡ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಬೀನಾನಾಗರಾಜು, ಬಿದಲೂರು ಗ್ರಾಪಂ ಅಧ್ಯಕ್ಷ ನಾಗರಾಜು, ಧ್ಯಾನ ತರಬೇತುದಾರ ದಂಪತಿ ನೆದರ್ಲ್ಯಾಂಡಿನ ಬೆರ್ನಾಡ್ ಮಾರ್ಕಸ್ ಮತ್ತು ರೆಬೆಕ ಬುಶ್, ಮುಖ್ಯಶಿಕ್ಷಕ ನವೀನ್ಕುಮಾರ್ ಇತರರಿದ್ದರು.(ಫೋಟೊ ಕ್ಯಾಪ್ಷನ್)
ದೇವನಹಳ್ಳಿಯ ಜ್ಞಾನದೀಪ ಶಾಲೆಯ 25ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಡಾ. ದಿನೇಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜು, ಸಂಸ್ಥಾಪಕರಾ ಬೀನಾನಾಗರಾಜು, ಬಿದಲೂರು ಗ್ರಾಪಂ ಅಧ್ಯಕ್ಷ ನಾಗರಾಜು, ಬೆರ್ನಾಡ್ ಮಾರ್ಕಸ್ ಮತ್ತು ರೆಬೆಕ ಬುಶ್ ಚಾಲನೆ ನೀಡಿದರು.