ಬೇಕಲ ಗೋಕುಲಂ ಗೋಶಾಲೆ: 20ರಿಂದ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವ

KannadaprabhaNewsNetwork |  
Published : Oct 14, 2025, 01:02 AM IST
ಗೋಕುಲಂ ಗೋಶಾಲೆಯಲ್ಲಿ ರಾಷ್ಟ್ರೀಯ ಸಂಗೀತ ಉತ್ಸವ | Kannada Prabha

ಸಾರಾಂಶ

ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲೆ ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ಅ. 20 ರಿಂದ ನ. 1 ರ ವರೆಗೆ ಆಚರಿಸಲಿದೆ.

ಮಂಗಳೂರು: ಗೋವುಗಳಿಗೋಸ್ಕರ ಸಂಗೀತ ಸೇವೆ ನಡೆಯುವ ವಿಶ್ವದ ಏಕೈಕ ಗೋಶಾಲೆ ಎಂದು ಕರೆಯಲ್ಪಡುವ ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲೆ ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ಅ. 20 ರಿಂದ ನ. 1 ರ ವರೆಗೆ ಆಚರಿಸಲಿದೆ.

20ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಪವನ ಆಚಾರ್ ನೇತೃತ್ವದ ಸಂಗೀತ ಕಛೇರಿಯೊಂದಿಗೆ ಪ್ರಾರಂಭವಾಗಲಿದ್ದು, ಅಲ್ಲಿ ಐದು ವೀಣೆಗಳು ಒಟ್ಟಿಗೆ ಸೇರಲಿವೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಸಿಂಗಾಪುರ ಮತ್ತು ದುಬೈನ ಸುಮಾರು 400 ಕಲಾವಿದರು ಬೆಳಗ್ಗೆ 9 ರಿಂದ ರಾತ್ರಿ 10 ರ ವರೆಗೆ ಸತತ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಈ ಬಾರಿ ಪದ್ಮವಿಭೂಷಣ ಡಾ. ಪದ್ಮಾ ಸುಬ್ರಮಣಿಯಂ ಅವರು ಸಮಾರೋಪ ದಿನದಂದು ನೃತ್ಯ ಪ್ರದರ್ಶಿಸಲಿದ್ದಾರೆ. ಅಲ್ಲದೆ ಡ್ರಮ್ ಮಾಸ್ಟರ್ ಶಿವಮಣಿ ಕೂಡ ಆಗಮಿಸಿ ಗಮನ ಸೆಳೆಯಲಿದ್ದಾರೆ.

ಸಂಗೀತ ಲೋಕದ ದಿಗ್ಗಜ 93 ವರ್ಷದ ಟಿ.ವಿ. ಗೋಪಾಲಕೃಷ್ಣನ್ ಅವರು ಗೋಶಾಲೆ ಸಂಗೀತೋತ್ಸವದಲ್ಲಿ ಹಾಡಲಿದ್ದಾರೆ. ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ವಿದ್ಯಾ ಭೂಷಣ್, ಕರ್ನಾಟಕ ಸಹೋದರರು, ಬೆಂಗಳೂರಿನ ಸಹೋದರರಾದ ಎನ್.ಜೆ. ನಂದಿನಿ, ಶಂಕರನ್ ನಂಬೂದಿರಿ, ಪ್ರಮುಖ ವೀಣಾ ವಿದ್ವಾಂಸರಾದ ಅನಂತ ಪದ್ಮನಾಭನ್, ​​ರಾಜೇಶ್ ವೈದ್ಯ, ರಮಣ ಬಾಲಚಂದ್ರ, ಕಣ್ಣನ್ ಚೆನ್ನೈ ಮುಂತಾದವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ಅನೂಪ್ ಶಂಕರ್ ಕೂಡ ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಪ್ರದರ್ಶಿಸಲಿದ್ದಾರೆ. ಪ್ರಮುಖ ಸಂಗೀತಗಾರರು 13 ದಿನಗಳ ಕಾಲ ಸಂಗೀತ ಮಳೆಗರೆಯುತ್ತಿದ್ದಂತೆ ಹಸುಗಳು ತಲೆಯಾಡಿಸುತ್ತಿರುವುದು ಗೋಶಾಲೆಗೆ ಭೇಟಿ ನೀಡುವ ಅಭಿಮಾನಿಗಳಿಗೆ ಕುತೂಹಲ ಮೂಡಿಸುವ ವಿಷಯವಾಗಿದೆ.

ಜ್ಯೋತಿಷಿ ವಿಷ್ಣು ಪ್ರಸಾದ್ ಹೆಬ್ಬಾರ್ ಮತ್ತು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ಸ್ತನ ಕ್ಯಾನ್ಸರ್‌ನಲ್ಲಿ ಸಂಶೋಧನಾ ಪದವಿ ಪಡೆದ ಡಾ. ನಾಗರತ್ನ ಹೆಬ್ಬಾರ್ ಅವರ ನೇತೃತ್ವದಲ್ಲಿ ಗೋಶಾಲೆ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ