ಹಿಟ್‌ ಅಂಡ್‌ ರನ್‌ ಕೇಸ್‌ : ಎರಡೇ ಗಂಟೆಯಲ್ಲಿ ಚಾಲಕ ಪೊಲೀಸ್‌ ಬಲೆಗೆ

Published : Jun 16, 2025, 07:57 AM IST
KSRP

ಸಾರಾಂಶ

ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಚೇಸ್‌ ಮಾಡಿ ಎರಡೇ ಗಂಟೆಯಲ್ಲೇ ಬಂಧಿಸಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

 ಬೆಳಗಾವಿ: ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಚೇಸ್‌ ಮಾಡಿ ಎರಡೇ ಗಂಟೆಯಲ್ಲೇ ಬಂಧಿಸಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

 ಕಿತ್ತೂರು ತಾಲೂಕಿನ ಉಮೇಶ ದೇಸೂರಕರ್ (30) ರಸ್ತೆ ಅಪಘಾತದಲ್ಲಿ ಮೃತ ವ್ಯಕ್ತಿ. ಲಾರಿ ಚಾಲಕ ಹಮ್ಮಿದಖಾನ್ ಬಂಧಿತ ಆರೋಪಿ. ಚಾಲಕ ಪಾದಚಾರಿ ವ್ಯಕ್ತಿ ಮೇಲೆ ಲಾರಿ ಹರಿಸಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಪೊಲೀಸರು ಎರಡೇ ಗಂಟೆಯಲ್ಲೇ ಚೇಸ್‌ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹಿರೇಬಾಗೆವಾಡಿ ಪೊಲೀಸರ ಕಾರ್ಯಾಚರಣೆಗೆ ಕಮಿಷನರ್‌ ಭೂಷಣ ಬೋರಸೆ ಅಭಿನಂದನೆ ಸಲ್ಲಿಸಿದ್ದಾರೆ.

PREV
Stay informed with the latest news from Belagavi district (ಬೆಳಗಾವಿ ಸುದ್ದಿ) — covering local governance, industry & economy, agriculture and farming, heritage & tourism, community events, civic issues, and district-level developments in Belagavi only on Kannada Prabha News.
Read more Articles on

Recommended Stories

ಬೆಂಬಲ ಬೆಲೆಯಡಿ ಸೋಯಾಬೀನ್‌ ಖರೀದಿ ನೋಂದಣಿ ಬಂದ್‌
ಟನ್ ಕಬ್ಬಿಗೆ ₹ 4 ಸಾವಿರ ಬೆಂಬಲ ಬೆಲೆ ನಿಗದಿಗೆ ಒತ್ತಾಯ