ಮೇ 26ಕ್ಕೇ ಕೇರಳಕ್ಕೆ ಮುಂಗಾರು : ಸಾಮಾನ್ಯಕ್ಕಿಂತ ಮೊದಲೇ ದೇಶಕ್ಕೆ ಮುಂಗಾರು ಪ್ರವೇಶ

Published : May 16, 2026, 11:29 AM IST
Monsoon

ಸಾರಾಂಶ

ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆಗಳ ಜೀವನಾಡಿಯಾದ ಮುಂಗಾರು ಮಾರುತಗಳು ಮೇ 26ಕ್ಕೆ ಕೇರಳ ಪ್ರವೇಶ ಮಾಡಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಸಾಮಾನ್ಯವಾಗಿ ಜೂ.1ಕ್ಕೆ ಮುಂಗಾರು ದಕ್ಷಿಣದ ತುತ್ತತುದಿಯ ಕರಾವಳಿ ರಾಜ್ಯ ಪ್ರವೇಶ ಮಾಡುತ್ತದೆ.

ನವದೆಹಲಿ: ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆಗಳ ಜೀವನಾಡಿಯಾದ ಮುಂಗಾರು ಮಾರುತಗಳು ಮೇ 26ಕ್ಕೆ ಕೇರಳ ಪ್ರವೇಶ ಮಾಡಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಸಾಮಾನ್ಯವಾಗಿ ಜೂ.1ಕ್ಕೆ ಮುಂಗಾರು ದಕ್ಷಿಣದ ತುತ್ತತುದಿಯ ಕರಾವಳಿ ರಾಜ್ಯ ಪ್ರವೇಶ ಮಾಡುತ್ತದೆ. ಆ ಲೆಕ್ಕಾಚಾರದಲ್ಲಿ 5 ದಿನಗಳ ಮೊದಲೇ ಆಗಮನ ಲೆಕ್ಕಾಚಾರವಿದೆ.

ಮೇ ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಆರಂಭ

ಮೇ ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಆರಂಭವಾಗುವ ಮುಂಗಾರು ಮಳೆ ಮುಂದಿನ 4 ತಿಂಗಳ ಹಂತಹಂತವಾಗಿ ದೇಶಾದ್ಯಂತ ವ್ಯಾಪಿಸಿ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುತ್ತದೆ. ಇದು ದೇಶದ ಒಟ್ಟು ಮಳೆಯಲ್ಲಿ ಶೇ.70ರಷ್ಟು ಪಾಲು ಹೊಂದಿರುತ್ತದೆ. ಪ್ರಸಕ್ತ ವರ್ಷ ದೇಶವ್ಯಾಪಿ ಸರಾಸರಿ 80 ಸೆಂ.ಮೀನಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ. ಆದರೆ ಎಲ್‌ನಿನೋದ ಪರಿಣಾಮ ಈ ಬಾರಿ ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಮುಂಗಾರು ಮಾರುತ ಕೇರಳ ಪ್ರವೇಶದಲ್ಲಿ 4 ದಿನ ವಿಳಂಬ ಅಥವಾ 4 ದಿನ ಮೊದಲೇ ಬರುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಹೇಳಿದೆ.

ಪೂರಕವಾದ ವಾತಾವರಣ ನಿರ್ಮಾಣ

ಮುಂದಿನ 24 ಗಂಟೆಗಳಲ್ಲಿ ಮುಂಗಾರು ಮಾರುತಗಳು ಅಂಡಮಾನ್ ಸಮುದ್ರ ಮತ್ತು ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪ ಪ್ರವೇಶಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹ್ಯಾಕರ್‌ ಶ್ರೀಕಿ ಬಳಸಿ ಶ್ರೀಮಂತ ಮಕ್ಕಳ ಹವಾಲಾ!
ರಾಜ್ಯಕ್ಕೆ ಈ ಬಾರಿ ನಾಲ್ಕೈದು ದಿನ ಮೊದಲೇ ಮುಂಗಾರು ಪ್ರವೇಶ ?