ಸಂಡೂರು: ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಭಿನ್ನ ಪ್ರಯತ್ನಗಳು ತಾಲೂಕಿನಲ್ಲಿ ನಡೆದಿದ್ದು, ಅದರ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಮತ್ತವರ ತಂಡದ ಸದಸ್ಯರು ಶನಿವಾರ ನುಸಕಿನಲ್ಲಿ 5ಕ್ಕೆ ಕೊರೆಯುವ ಚಳಿಯ ನಡುವೆ ಸಂಡೂರು ಪುರಸಭೆ ವ್ಯಾಪ್ತಿಯಲ್ಲಿನ ಲಕ್ಷ್ಮೀಪುರದಲ್ಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ವಿದ್ಯಾರ್ಥಿಗಳಿದೆ ಮಾರ್ಗದರ್ಶನ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅವರ ತಂಡದ ಸದಸ್ಯರು ನಸುಕಿನಲ್ಲಿಯೇ ತಮ್ಮ ಮನೆಗಳಿಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಅಚ್ಚರಿಯ ಜೊತೆಗೆ ಸಂತಸವನ್ನುಂಟು ಮಾಡಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಈ ಕಾರ್ಯಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಗೋಳಪ್ಪ, ಶಿಕ್ಷಕರಾದ ಕಲ್ಲಯ್ಯಮಠ, ಮೆಹಬೂಬ್ಬಾಷ, ಷಣ್ಮುಖರಾವ್, ಪುರುಷೋತ್ತಮ್, ನಿವೃತ್ತ ಶಿಕ್ಷಕ ದೇವರಮನೆ ನಾಗಪ್ಪ ಉಪಸ್ಥಿತರಿದ್ದರು.