ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘಟನೆಯಿಂದ ನಡೆದ ಗ್ರಾಮಸ ಮಿತಿ ಸಭೆ, ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿ, ಹಳ್ಳಿಗಳೇ ಭಾರತೀಯ ಕಿಸಾನ್ ಸಂಘಟನೆಯ ಆತ್ಮವಾಗಿದೆ. ದೇಶದಲ್ಲಿ 72 ಸಾವಿರ ಗ್ರಾಮ ಸಮಿತಿ, 600 ಜಿಲ್ಲಾ ಸಂಘಟನೆ ಹಾಗೂ 4 ಸಾವಿರ ತಾಲೂಕು ಕಿಸಾನ್ ಸಂಘಟನೆಗಳು ಲಕ್ಷಾಂತರ ಮಂದಿ ರೈತರು ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ಸಂಘಟನೆ ರಾಜಕೀಯ ಹೊರತಾಗಿ ಕೆಲಸ ಮಾಡುತ್ತಿದೆ. ಇಲ್ಲಿ ರೈತರೇ ನಮ್ಮ ಸಂಘಟನೆ ನಾಯಕರಾಗಿ ಕೆಲಸ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ಇದೊಂದು ತತ್ವ,ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಘಟನೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ಜವಾಬ್ದಾರಿ ಹೊತ್ತ ವ್ಯಕ್ತಿಗಳು ಬದಲಾವಣೆಯಾಗಲಿದ್ದು, ಹೊಸ ವ್ಯಕ್ತಿಗೆ ಜವಾಬ್ದಾರಿಕೊಟ್ಟು ರೈತರ ಪರವಾಗಿ ಕೆಲಸ ಮಾಡಲಾಗುತ್ತದೆ ಎಂದರು.ಕಿಸಾನ್ ಸಂಘದಲ್ಲಿ ಗ್ರಾಮ ಸಮಿತಿ ಪ್ರಮುಖವಾಗಿದೆ. ಗ್ರಾಮ ಸಮಿತಿ ಮೂಲಕ ರೈತರು ಯಾವರೀತಿ ಕೆಲಸ ಮಾಡಬೇಕು, ಕೃಷಿ ಚಟುವಟಿಕೆ ನಡೆಸಬೇಕು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ದಕ್ಷಿಣ ಪ್ರಾಂತ್ಯದಲ್ಲಿ 17 ಜಿಲ್ಲೆ, 113 ತಾಲೂಕುಗಳ ಪೈಕಿ 80 ತಾಲೂಕುಗಳಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. 6 ಸಾವಿರ ಗ್ರಾಮಿ ಸಮಿತಿ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನೀಡಿ ಆ ಮೂಲಕ ಸಂಘಟನಾತ್ಮಕ, ಆಂದೋಲನಾತ್ಮಕ ಹಾಗೂ ರಚನಾತ್ಮಕವಾಗುವ ಗ್ರಾಮ ಸಮಿತಿಗಳು ಹೇಗೆ, ಯಾಕೆ ಕೆಲಸ ಮಾಡಿ ರೈತರಿಗೆ ಸ್ವಾವಲಂಭಿ ಬದುಕು, ಮಾರುಕಟ್ಟೆ ನಿರ್ಮಾಣದ ಕುರಿತು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.