ಕನ್ನಡಪ್ರಭ ವಾರ್ತೆ ಉಡುಪಿ
ಭೀಮಾ ಕೊರೆಗಾಂವ್ ಕದನ ಕೇವಲ ಬ್ರಾಹ್ಮಣ ರಾಜನ ಸೋಲಿಸಿದ ಗೆಲುವಾಗಿರದೇ ಶತಮಾನಗಳ ಅಸ್ಪೃಶ್ಯತಾಚರಣೆಯ, ಚಾತುರ್ವರ್ಣ ಧರ್ಮದ ಹಾಗೂ ಮೇಲ್ಜಾತಿ ಮೇಲರಿಮೆ ದರ್ಪದ ವಿರುದ್ಧದ ಗೆಲುವಾಗಿದ್ದು, ದಲಿತರು ಸಂಭ್ರಮಿಸುವ ದಿನವಾಗಿದೆ ಎಂದರು.ಹಿರಿಯ ದಲಿತ ನಾಯಕ ದಯಾಕರ್ ಮಲ್ಪೆ ಮಾತನಾಡಿ, ಕೊರೆಗಾಂವ್ ಯುದ್ಧದ ನೆನಪಿಗೆ ಬ್ರಿಟೀಷ್ ಸರ್ಕಾರ ಭೀಮ ಕೊರೆಗಾಂವ್ ಸ್ತಂಭವನ್ನು ನಿರ್ಮಿಸಿದೆ. ಇದು ಮಹಾರಾಷ್ಟ್ರದಲ್ಲಿ ಇನ್ನೂರು ವರ್ಷಗಳ ಹಿಂದೆ ನಡೆದಿದ್ದ ಇತಿಹಾಸವಾಗಿದ್ದು, ಇಂದು ದಲಿತರಿಗೆ ಶೌರ್ಯ ದಿನದ ಪ್ರೇರಣೆಯಾಗಿದೆ ಎಂದು ಹೇಳಿದರು.ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ದಲಿತರ ಪ್ರತಿರೋಧದ ಕಾರ್ಯಕ್ರಮವನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಮನುವಾದಿಗಳಿಗೆ ಕೊರೆಗಾಂವ್ ಇತಿಹಾಸ ಮುಂದಿಟ್ಟು ಹೋರಾಡಬೇಕು ಎಂದರು.ಕಾರ್ಯಕ್ರವದಲ್ಲಿ ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್, ದೀಪಕ್ ಕೊಡವೂರು, ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಈಶ್ವರ ಬಿ. ಲಂಬಾಣಿ, ವಿನಯ ಬಲರಾಮನಗರ, ಗುಣವಂತ ತೊಟ್ಟಂ, ಸುಧೀರ್ ಲಂಬಾಣಿ ಮುಂತಾದವರು ಉಪಸ್ಥಿತರಿದ್ದರು. ಭಗವಾನ್ ನೆರ್ಗಿ ಸ್ವಾಗತಿಸಿದರು ಪ್ರಸಾದ್ ಮಲ್ಪೆ ವಂದಿಸಿದರು.