ಬ್ಯಾಡಗಿ: ಕೋರ್ಟ್ ಮೆಟ್ಟಿಲೇರಿದ್ದ ಮೋಟೆಬೆನ್ನೂರ ಗ್ರಾಮದ ಕುರುಬಗೇರಿ ದುರ್ಗಾದೇವಿ ಪಾದಗಟ್ಟಿ ಜಾಗದ ವಿವಾದ ಇದೀಗ ಮುಕ್ತಾಯಗೊಂಡು ಹಿರಿಯರ ಮಧ್ಯಸ್ಥಿಕೆಯಲ್ಲಿ ಪಾದಗಟ್ಟಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ಪಾದಗಟ್ಟಿ ನಿರ್ಮಾಣ ಸಮಿತಿ ಹಾಗೂ ಬಸವರಾಜ ಬ್ಯಾಡಗಿ ಮತ್ತು ಪರಮೇಶ ಬ್ಯಾಡಗಿ ಈರ್ವರ ನಡುವೆ ಪಾದಗಟ್ಟಿ ಜಾಗದ ವಿಷಯ ಕೋರ್ಟ್ ಮೆಟ್ಟಿಲೇರಿತ್ತು ಆದರೆ ಪಾದಗಟ್ಟಿ ನಿರ್ಮಾಣ ಸಮಿತಿಯ ವಿರುದ್ಧ ಕೋರ್ಟ್ ಆದೇಶಿಸಿ ಜಾಗವು ಬಸವರಾಜ ಬ್ಯಾಡಗಿ ಮತ್ತು ಪರಮೇಶ ಬ್ಯಾಡಗಿ ಇವರಿಗೆ ಸೇರಿದ್ದು ಎಂಬುದಾಗಿ ಆದೇಶಿಸಿತ್ತು. ಹಿರಿಯರ ಮಧ್ಯಸ್ಥಿಕೆಯಲ್ಲಿ ಮನವೊಲಿಕೆ:
ಭೂಮಿಪೂಜೆ ಸುಗಮ: ಜಾಗದ ಮಾಲೀಕರ ಸಕಾರಾತ್ಮಕ ನಿರ್ಧಾರದಿಂದ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಾದಗಟ್ಟಿ ನಿರ್ಮಾಣ ಭೂಮಿಪೂಜೆ ಕಾರ್ಯವು ಸುಗಮವಾಗಿ ನೆರವೇರಿತು. ಈ ಸಂದರ್ಭದಲ್ಲಿ ಶಿವಬಸಣ್ಣ ಕುಳೇನೂರ, ನಾಗರಾಜ ಆನವೇರಿ, ಶಿವಪುತ್ರಪ್ಪ ಅಗಡಿ, ನಿಂಗಪ್ಪ ಕರಿಸಿದ್ದಣ್ಣನವರ, ಸಣ್ಣಫಕ್ಕೀರಪ್ಪ ಬಟ್ಟಲಕಟ್ಟಿ, ಮಾಲತೇಶ ಕುರಿಯವರ, ಶಿವಪ್ಪ ಕರಿಸಿದ್ದಣ್ಣನವರ, ಮಂಜಣ್ಣ ಎಲಿ ಹಾಗೂ ಇನ್ನಿತರರಿದ್ದರು.