ಜಾಹೀರಾತು ಸುದ್ದಿ ಮಿಡ್ಲ್‌ ಪಕ್ಕ..ಪ್ಯಾರಾಕ್ವಾಟ್ ವಿಷ ಸೇವಿಸಿದ್ದ ಬಾಲಕಿಗೆಬಿಲ್ವ ಆಸ್ಪತ್ರೆಯ ಯಶಸ್ವಿ ಚಿಕಿತ್ಸೆ

KannadaprabhaNewsNetwork |  
Published : Aug 13, 2026, 01:30 AM IST
ಫೋಟೋ- ಪ್ಯಾರಾ ಕ್ವಾಟ್‌ ಚಿಕಿತ್ಸೆ ತಂಡ | Kannada Prabha

ಸಾರಾಂಶ

A team of doctors at Bilva Multispecialty Hospital successfully treated and cured a 16-year-old girl who was suffering from Paraquat poisoning.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ಯಾರಾಕ್ವಾಟ್ ವಿಷ ಸೇವನೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕಿಗೆ ಬಿಲ್ವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದೆ.

ಪ್ಯಾರಾಕ್ವಾಟ್ ಅತ್ಯಂತ ವಿಷಕಾರಿ ಹಾಗೂ ಜೀವಕ್ಕೆ ಅಪಾಯಕಾರಿ ವಿಷವಾಗಿದ್ದು, ತೀವ್ರ ವಿಷಬಾಧೆಯಲ್ಲಿ ಮರಣದ ಅಪಾಯ ಹೆಚ್ಚಾಗಿರುತ್ತದೆ.

ವಿಷ ಸೇವಿಸಿದ 4 ಗಂಟೆಯೊಳಗೆ ಬಾಲಕಿಯನ್ನು ಬಿಲ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಮಯೋಚಿತ ವೈದ್ಯಕೀಯ ಮಧ್ಯಪ್ರವೇಶದೊಂದಿಗೆ ತೀವ್ರ ನಿಗಾ ಘಟಕ ಹಾಗೂ ನೆಫ್ರಾಲಜಿ ತಂಡವು ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿತು. ಆರಂಭಿಕ ನಿರ್ವಹಣೆಯ ಭಾಗವಾಗಿ ವಿಶೇಷ ರೀತಿಯ ಡಯಾಲಿಸಿಸ್, ಚಾರ್ಕೋಲ್ ಡಯಾಲಿಸಿಸ್‌ ನಡೆಸಲಾಯಿತು.

ಪುಲ್ಮನಾಲಜಿ ತಂಡದ ನಿರಂತರ ಮೇಲ್ವಿಚಾರಣೆ ಮತ್ತು ಸೂಕ್ತ ಚಿಕಿತ್ಸೆಯಿಂದ ಈ ತೊಂದರೆಗಳನ್ನು ಯಶಸ್ವಿಯಾಗಿ ನಿಯಂತ್ರಿಸಲಾಯಿತು. ಅಗತ್ಯವಿದ್ದಲ್ಲಿ ಎದೆಗೆ ಟ್ಯೂಬ್‌ಗಳನ್ನು ಅಳವಡಿಸಿ ಚಿಕಿತ್ಸೆ ನೀಡಲಾಯಿತು.

ಬಾಲಕಿಯ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಕ್ಷೇಮಕ್ಕಾಗಿ ಮನೋವೈದ್ಯ/ಮನೋವಿಜ್ಞಾನಿಗಳಿಂದ ಸೂಕ್ತ ಕೌನ್ಸೆಲಿಂಗ್ ನೀಡಲಾಯಿತು.

ನಿರಂತರ ಮೇಲ್ವಿಚಾರಣೆ, ಸಮಗ್ರ ಚಿಕಿತ್ಸೆ ಹಾಗೂ ವಿವಿಧ ವಿಭಾಗಗಳ ವೈದ್ಯಕೀಯ ತಂಡಗಳ ಸಮನ್ವಯದಿಂದ ಬಾಲಕಿ ಕ್ರಮೇಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ.

ಬಿಲ್ವ ಆಸ್ಪತ್ರೆ ಮುಖ್ಯ ವೈದ್ಯ ಡಾ. ರೇಣುಪ್ರಸಾದ್ ಚಿಕ್ಕಮಠ, ಡಾ. ಸುಷ್ಮಾ ಆರ್. ಚಿಕ್ಕಮಠ, ಡಾ. ಅನಿಲ್ ಎಸ್.ಕೆ, ಡಾ. ಶ್ರೀರಾಜ್, ಡಾ. ಆನಂದ್, ಡಾ. ಕೃತಿಕಾ, ಡಾ. ವಿವೇಕ್ ಪಾಟೀಲ್, ಡಾ. ರೇವಣ್ ಆಲಂದ್ ತಂಡದವರು ಬಾಲಕಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.

....ಕೋಟ್‌....

ಅತ್ಯಂತ ವಿಷಕಾರಿ ಪ್ಯಾರಾಕ್ವಾಟ್ ವಿಷಬಾಧೆಯಂತಹ ಜೀವಕ್ಕೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮಯೋಚಿತ ಚಿಕಿತ್ಸೆ, ನಿರಂತರ ಮೇಲ್ವಿಚಾರಣೆ ಹಾಗೂ ಬಹುವಿಭಾಗೀಯ ವೈದ್ಯಕೀಯ ತಂಡದ ಸಮನ್ವಯ ಮಹತ್ವದ್ದಾಗಿದೆ.

-ಡಾ. ರೇಣುಪ್ರಸಾದ್‌ ಚಿಕ್ಮಠ, ಮುಖ್ಯ ವೈದ್ಯರು, ಬಿಲ್ವ ಆಸ್ಪತ್ರೆ. ಕಲಬುರಗಿ

--

ಫೋಟೋ

ಪ್ಯಾರಾ ಕ್ವಾಟ್‌ ಚಿಕಿತ್ಸಾ ತಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮನ ಅಮಾವಾಸ್ಯೆ: ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ಸ್ತ್ರೀಯರಿಂದ ದೇಶಕ್ಕೆ ಕೊಡುಗೆ: ಶಿವಯೋಗೀಶ್ವರ ಶ್ರೀ