ಜನರಿಗೆ ತೊಂದರೆ ಮಾಡುವ ಬಿಜೆಪಿ ಪ್ರತಿಭಟನೆ ಸಲ್ಲ: ಶಾಸಕ ಡಿ.ಜಿ.ಶಾಂತನಗೌಡ

KannadaprabhaNewsNetwork |  
Published : Nov 19, 2025, 12:15 AM IST
ಹೊನ್ನಾಳಿ ಫೋಟೋ 18ಎಚ್.ಎಲ್.ಐ2.ಮಂಗಳವಾರ ತಾಲೂಕಿನಲ್ಲಿ ಬಿಜೆಪಿ ಪಕ್ಷದವದತಿಯಿಂದ ಪ್ರತಿಭಟನೆ, ಬಂದ್ ನಡೆದ ಸಂದರ್ಭದಲ್ಲಿ  ಎಚ್.ಬಿ.ಮಂಜಪ್ಪ ಅವರು ಎಂ.ಎಸ್. ಫಾಲಾಕ್ಷಪ್ಪ ನಡೆವೆ ವಾದ್ಗಾಳಿ ನಡೆದ ಕಾರಣ ಶಾಸಕ ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ   ಹಾಗೂ ಕಾಂಗ್ರೇಸ್ ಮುಖಂಡರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದರು. .  | Kannada Prabha

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಬೇಕು ಆದರೆ ಬಿಜೆಪಿಯವರು ಇದನ್ನು ಮೀರಿ ವಿದ್ಯಾರ್ಥಿಗಳು, ಯುವಕರನ್ನು ಪ್ರಚೋದನೆ ಮಾಡುವ ರೀತಿಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಬೇಕು ಆದರೆ ಬಿಜೆಪಿಯವರು ಇದನ್ನು ಮೀರಿ ವಿದ್ಯಾರ್ಥಿಗಳು, ಯುವಕರನ್ನು ಪ್ರಚೋದನೆ ಮಾಡುವ ರೀತಿಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಬಿಜೆಪಿ ವತಿಯಂದ ಮಂಗಳವಾರ ಹೊನ್ನಾಳಿ ಮತ್ತು ನ್ಯಾಮತಿ ಅ‍ವಳಿ ತಾಲೂಕುಗಳಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ ಹಾಗೂ ಬಂದ್ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ಹೊನ್ನಾಳಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಬಂದ್‌ನಿಂದ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಪ್ರಯಾಣಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಹೇ‍ಳಿ ಬಸ್‌ಗಳನ್ನು ಹೋಗಲು ಬಿಡುವಂತೆ ತಿಳಿಸಿ ಹೊಟೇಲ್, ಅಂಗಡಿಗಳನ್ನು ತೆರೆಯುವಂತೆ ಹೇಳಿದಾಗ ಮುಖಂಡ ಎಂ.ಎಸ್. ಪಾಲಾಕ್ಷಪ್ಪ ಹಾಗೂ ಎಚ್.ಬಿ.ಮಂಜಪ್ಪ ನಡುವೆ ತೀವ್ರ ವಾಗ್ದಾಳಿ, ತಳ್ಳಾಟ ನಡೆದು, ಪಾಲಾಕ್ಷಪ್ಪ ಅವರು ತನ್ನ ಮೇಲೆ ಎಚ್.ಬಿ.ಮಂಜಪ್ಪ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಶಾಸಕ ಡಿ.ಜಿ.ಶಾಂತನಗೌಡ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಿಜಿಪಿಯವರು ಕೇವಲ ಪ್ರಚಾರಕ್ಕಾಗಿ ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಕೇವಲ ಹೊನ್ನಾಳಿ, ನ್ಯಾಮತಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳು ಗುಂಡಿಗಳಿಂದ ಕೊಡಿವೆ, ಶಿವಮೊಗ್ಗ ಮುಖ್ಯ ರಸ್ತೆಗೆ 40 ಕೋಟಿ ರು. ಹಾಕಲಾಗಿದೆ. ಇದೀಗ ಮಳೆಗಾಳ ಮುಗಿದಿದ್ದು, ಈಗ ತಾತ್ಕಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಇದಕ್ಕೆ 5 ಕೋಟಿ ರು. ಹಣ ಬಿಡುಗಡೆ ಕೂಡ ಆಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ರೇಣುಕಾಚಾರ್ಯ ಅವರ ಅಧಿಕಾರವಾಧಿಯಲ್ಲಿ ಕೂಲಂಬಿ, ಕರ್ಕಿ ರಸ್ತೆ, ಸಾಸ್ವೇಹಳ್ಳಿ ಯಿಂದ ನಲ್ಲೂರು ರಸ್ತೆಗಳು ಕಳಪೆ ಕಾಮಗಾರಿಯ ಫಲವಾಗಿ ಇಂದಿಗೂ ಗುಂಡಿಗಳಿಂದ ತುಂಬಿವೆ ಇದನ್ನು ಕೇಳುವವರು ಯಾರು ಎಂದು ಶಾಸಕ ಶಾಂತನಗೌಡ ಪ್ರಶ್ನೆ ಮಾಡಿದರು.

ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಮಾದ್ಯಮದವರ ಪ್ರಶ್ನೆಗೆ, ತಾನು ಸಚಿವ ಸ್ಥಾನದ ಅಕಾಂಕ್ಷಿಯಲ್ಲ. ಒಂದು ವೇಳೆ ಪಕ್ಷದ ವರಿಷ್ಠರು ಆವರಾಗಿಯೇ ಮಂತ್ರಿ ಸ್ಥಾನ ಕೊಟ್ಟರೆ ನನ್ನ ಭಾಗ್ಯ. ಸಚಿವ ಸ್ಥಾನ ನಿಭಾಯಿಸುವ ಎಲ್ಲಾ ಶಕ್ತಿ ನನಗೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಆಧ್ಯಕ್ಷ ಎಚ್.ಬಿ.ಮಂಜಪ್ಪ. ಬೆಜಿಪಿಯುವರು ಬೆಳಿಗ್ಗೆ 6 ರಿದ ಸಂಜೆ 6ರವಗೆ ಬಂದ್ ಮಾಡಿ ಬೇರೆ ಬೇರೆ ಊರುಗಳಿಗೆ ತೆರಳುವ ಬಸ್ ಹಾಗೂ ಇತರೆ ವಾಹಗಳನ್ನು ತಡೆದು ನಿಲ್ಲಿಸಿದರೆ ಅನೇಕ ತುರ್ತು ಕೆಲಸಗಳಿಗೆ ಹೋಗುತ್ತಿರುವ ಜನರಿಗೆ, ಮಹಿಳೆಯರ ಪಾಡೇನು. ಅವರ ಪರಿಸ್ಥಿತಿ ಏನಾಗಬೇಕು ಎಂದರು.

ಟಿ.ಎಂ..ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ಕುಳ್ಳಗಟ್ಟೆ ಶೇಖರಪ್ಪ, ಸಾಸ್ವೇಹಳ್ಳಿ ಎ.ಜಿ, ಚಂದ್ರಶೇಖರಪ್ಪ, ಮಧುಗೌಡ, ಪಕ್ಷದ ಇತರೆ ಮುಖಂಡರು, ಕಾರ್ಯಕರ್ತರು ಇದ್ದರು.

PREV

Recommended Stories

ಹೊನ್ನಾಳಿಯಲ್ಲಿ ಭತ್ತಕ್ಕೆ ಬೆಂಬಲ ಬೆಲೆ ನೀಡಲು ಬಿಜೆಪಿ ಆಗ್ರಹ, ಪ್ರತಿಭಟನೆ
ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಲಿ: ಪಿಎಸ್‌ಐ ಮೋಹನ್ ರಾಜಣ್ಣ