ದಲಿತ, ಆದಿವಾಸಿಗಳ ಮೇಲೆ ದೌರ್ಜನ್ಯಕ್ಕೆ ಸಿಪಿಐ ಖಂಡನೆ

KannadaprabhaNewsNetwork |  
Published : Nov 19, 2025, 12:15 AM IST
18ಕೆಡಿವಿಜಿ1, 2-ದಾವಣಗೆರೆಯಲ್ಲಿ ಮಂಗಳವಾರ ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷ ಪ್ರತಿಭಟಿಸಿತು. | Kannada Prabha

ಸಾರಾಂಶ

ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದಿಂದ (ಸಿಪಿಐ) ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದಿಂದ (ಸಿಪಿಐ) ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಿಪಿಐ ರಾಜ್ಯ ಮಂಡಳಿ ಕರೆಯ ಮೇರೆಗೆ ಪಕ್ಷದ ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರತಿಭಟನಾ ದಿನವಾಗಿ ಆಚರಿಸಿದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತಾಯಿಸಿ, ದಲಿತರ, ಆದಿವಾಸಿ, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಸಿ, ಸಿಪಿಐ ರಾಜ್ಯವ್ಯಾಪಿ ಕರೆಯ ಮೇರೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ. ದೇಶದ ಇತಿಹಾಸದಲ್ಲಿ ಶತ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ, ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರು ಇಂದಿಗೂ ದೌರ್ಜನ್ಯಗಳಿಂದ ಮುಕ್ತರಾಗಿಲ್ಲ ಎಂದರು.

ಇಂದಿಗೂ ದೌರ್ಜನ್ಯ, ಶೋಷಣೆಗಳು ಇಂದಿಗೂ ನಿರಂತರ ಮುಂದುವರಿಯುತ್ತಿವೆ. ಭಾರತದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮೃತಿಯ ಆದಾರದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ, ಮನುಷ್ಯರನ್ನು ಶ್ರೇಷ್ಟ ಮತ್ತು ಕನಿಷ್ಟ ಎಂಬುದಾಗಿ ವಿಭಜಿಸಿದೆ. ಆಳುವ ಸರ್ಕಾರಗಳು ಪರೋಕ್ಷವಾಗಿ ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿವೆ. ಇಂತಹದ್ದನ್ನು ಮೊದಲು ಸರ್ಕಾರಗಳು ಕೈಬಿಟ್ಟು, ಸಂವಿಧಾನಬದ್ಧವಾಗಿ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಾತಿ ತಾರತಮ್ಯವಿಲ್ಲದೇ ನಮ್ಮ ನೆಲ ಮತೀಯ ಮೂಲಭೂತವಾದಕ್ಕೂ ತುತ್ತಾಗಿದ್ದು, ಕೋಮು ಗಲಭೆಗಳು ಸಾಕಷ್ಟು ನೆತ್ತರು ಹರಿಯಲು ಕಾರಣವಾಗಿದೆ. ಇಂದಿಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವು ಪ್ರತಿಕ್ಷಣವೂ ಹಿಂಸಾಚಾರ, ಗುಂಪು ಹತ್ಯೆ, ನರಮೇಧ, ತಾರತಮ್ಯ, ಮಾನವ ಹಕ್ಕುಗಳಿಂದ ವಂಚಿತರಾಗುವುದು ಇಂದಿಗೂ ನಡೆಯುತ್ತಿದ್ದು, ಜನಾಂಗೀಯ ಕ್ರೌರ್ಯಕ್ಕೆ ಬಲಿಯಾಗುತ್ತಿದೆ. ಇದಕ್ಕೆಲ್ಲಾ ಭಾರತೀಯರ ಮನಸ್ಥಿತಿಗೆ ಮನುಸ್ಮೃತಿಯ ಮೌಲ್ಯಗಳೇ ಕಾರಣ‍ವಾಗಿವೆ ಎಂದು ದೂರಿದರು.

ದೇಶದ ಇತಿಹಾಸದಲ್ಲಿ ಶತಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ಈ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ. ಬದಲಿಗೆ ಇಂದಿಗೂ ಕೂಡ ಅವುಗಳು ಹವ್ಯಾಹತವಾಗಿ ಮುಂದುವರಿಯುತ್ತಿವೆ, ಭಾರತದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮತಿಯ ಆಧಾರದಲ್ಲಿ ಅಂದರೆ, ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠ ಎಂದು ವಿಭಜಿಸಿದೆ ಎಂದು ಆರೋಪಿಸಿದರು.

ಭಾರತದಲ್ಲಿ ಈಚಿನ ಘಟನೆಗಳನ್ನು ಒಮ್ಮೆ ವಿಶ್ಲೇಷಿಸಿದರೆ 2023ರ ಎನ್‌ಸಿಆರ್‌ಬಿ ವರದಿ ಪ್ರಕಾರ, ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 57 ಸಾವಿರ ಆಗಿದೆ. ದಲಿತ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2835 ಆಗಿದೆ. ಆದರೆ, ವಾಸ್ತವದಲ್ಲಿ ಪೊಲೀಸರ ಬಳಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇನ್ನೂ ಅದಿಕವೇ ಇದೆ. ಇನ್ನಾದರೂ ಸರ್ಕಾರಗಳು ಪರೋಕ್ಷವಾಗಿ ಇಂತಹ ಘಟನೆಗಳಿಗೆ ಅವಕಾಶ ನೀಡದೇ, ಸಂವಿಧಾನಬದ್ಧವಾಗಿ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐ ಮುಖಂಡರಾದ ಪಿ.ಷಣ್ಮುಖಸ್ವಾಮಿ, ಐರಣಿ ಚಂದ್ರು, ಕೆ.ಬಾನಪ್ಪ, ಸಿದ್ದಲಿಂಗೇಶ, ಶೇಖರ ನಾಯಕ, ನರೇಗಾ ರಂಗನಾಥ, ಕೆರೇನಹಳ್ಳಿ ರಾಜು, ಬೆಳಲಗೆರೆ ರುದ್ರಮ್ಮ, ಎ.ತಿಪ್ಪೇಶ, ಜಿ.ಯಲ್ಲಪ್ಪ, ಸರೋಜಾ, ಕೆ.ಜಿ.ಶಿವಮೂರ್ತಿ, ಚಿನ್ನಪ್ಪ, ರಮೇಶ ಸಿ.ದಾಸರ್, ಹರ್ಷ, ಗದಿಗೇಶ ಪಾಳೇದ, ಎಚ್.ಎಸ್.ಚಂದ್ರು, ಜಯಪ್ಪ, ಮಹೇಶ, ನಾಗಪ್ಪ ಇತರರು ಇದ್ದರು.

PREV

Recommended Stories

ಹೊನ್ನಾಳಿಯಲ್ಲಿ ಭತ್ತಕ್ಕೆ ಬೆಂಬಲ ಬೆಲೆ ನೀಡಲು ಬಿಜೆಪಿ ಆಗ್ರಹ, ಪ್ರತಿಭಟನೆ
ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಲಿ: ಪಿಎಸ್‌ಐ ಮೋಹನ್ ರಾಜಣ್ಣ