- ಸ್ವಯಂಕೃತ ಅಪರಾಧಕ್ಕೆ ಪಕ್ಷ ಸೋತಿದ್ದೇ ಹೊರತು, ರವೀಂದ್ರನಾಥ, ರೇಣುಕಾಚಾರ್ಯ ಕಾರಣರಲ್ಲ: ಸುರೇಶ ತಿರುಗೇಟು
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದ ದಾವಣಗೆರೆ ಬಾಯ್ಸ್ ಟೀಂ ಸ್ವಯಂಕೃತಾಪರಾಧ ಕಾರಣವೇ ಹೊರತು, ಬೇರೆ ಯಾರೂ ಅಲ್ಲ ಎಂದು ಕ್ಷೇತ್ರದ ವಿವಿಧ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ತಾಲೂಕು ಮಂಡಲ ಅಧ್ಯಕ್ಷ ಜೆ.ಕೆ.ಸುರೇಶ ಅವರು, ಬಿಜೆಪಿ ಸೋಲಿಗೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಮಾಡಾಳ ವಿರೂಪಾಕ್ಷಪ್ಪ, ಮಾಡಾಳ ಮಲ್ಲಿಕಾರ್ಜುನ್ ಅವರ ರೆಬಲ್ ಟೀಂ ಕಾರಣವೆಂಬ ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್, ಬಿ.ಎಸ್.ಜಗದೀಶ, ಎಚ್.ಎಸ್.ಶಿವಕುಮಾರ ತುಮ್ಕೋಸ್ ಆರೋಪ ಶುದ್ಧ ಸುಳ್ಳು ಎಂದರು.ಹಿಂಬಾಲಕರ ಮಾತು ಕೇಳಿದ್ದಿರಿ:
ಅತಿಯಾದ ಆತ್ಮವಿಶ್ವಾಸದ ಫಲ:
ಅಹಿಂದ ಮುಖಂಡ ಚನ್ನಗಿರಿಯ ಉಮೇಶ ಕುಮಾರ ಮಾತನಾಡಿ, ಅವಿಭಜಿತ್ರ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಸ್.ಎ.ರವೀಂದ್ರನಾಥ ಜಿಲ್ಲಾದ್ಯಂತ ಸುತ್ತಾಡಿ, ಪಕ್ಷ ಕಟ್ಟಿದವರು. ಈಗ ಮಾತನಾಡುತ್ತಿರುವವರು ಅಂದು ಎಲ್ಲಿದ್ದರು? ರವೀಂದ್ರನಾಥ ಬಗ್ಗೆ ಮಾತನಾಡುವ ನೈತಿಕತೆಯೇ ನಿಮಗ್ಯಾರಿಗೂ ಇಲ್ಲ. ಹೋಲಿಕೆಗೂ ಒಂದು ಮಿತಿ ಇದೆ. ಇನ್ನಾದರೂ ಬಾಯಿ ಮುಚ್ಚಿಕೊಂಡಿರಿ. ಹಿಂದೆ ರವೀಂದ್ರನಾಥ ಲೋಕಸಭೆಗೆ ಸ್ಪರ್ಧಿಸಿದ್ದಾಗ ಕೇವಲ 500 ಮತದಿಂದ ಸೋತಿದ್ದರು. ಇದನ್ನು ಮರೆಯಬೇಡಿ ಎಂದರು.
ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕುಬೇರಪ್ಪ, ಮುಖಂಡರಾದ ಅರಕೆರೆ ನಾಗರಾಜ, ನಲ್ಲೂರು ಮಂಜುನಾಥ, ಮಲ್ಲಿಕಾರ್ಜುನ, ಎನ್.ಎಚ್.ಹಾಲೇಶ, ಪ್ರವೀಣ ಜಾಧವ್, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ನೆಲಹೊನ್ನೆ ಮಂಜುನಾಥ, ಸಂತೋಷ ಇತರರು ಇದ್ದರು.
ಬಾಕ್ಸ್ * 4 ಸಲ ಟಿಕೆಟ್ ಕೊಟ್ಟರೂ ಜಾದವ್ ಗೆದ್ದಿಲ್ಲ ದಾವಣಗೆರೆಯಲ್ಲಿ ಬಿಜೆಪಿಯನ್ನು ತಾನೇ ಕಟ್ಟಿ ಬೆಳೆಸಿದಂತೆ ಮಾತನಾಡುವ ಯಶವಂತ ರಾವ್ ಜಾದವ್ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ. ದಕ್ಷಿಣದಲ್ಲಿ ಯಾವಾಗಲೂ ಕಾಂಗ್ರೆಸ್ಸಿಗೆ ಮುನ್ನಡೆಯಾಗಿದೆ. ಇದುವರೆಗೆ ಬಿಜೆಪಿಗೆ ಯಾಕೆ ಲೀಡ್ ಬಂದಿಲ್ಲ? ನಾಲ್ಕು ಸಲ ಯಶವಂತ ರಾವ್ ಜಾಧವ್ಗೆ ಟಿಕೆಟ್ ನೀಡಿದರೂ ಒಂದು ಸಲವೂ ಗೆಲ್ಲಲಿಲ್ಲ. ಮೊದಲು ದಕ್ಷಿಣದಲ್ಲಿ ಲೀಡ್ ಕೊಡಿಸಿ, ಆನಂತರ ಉಳಿದ ಕ್ಷೇತ್ರದ ಬಗ್ಗೆ ಯಶವಂತ ರಾವ್ ಮಾತನಾಡಲಿ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ಯಾಕೆ ನೋಡುತ್ತಾರೆ ಎಂದು ಅಹಿಂದ ಮುಖಂಡ ಉಮೇಶ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕೋಟ್ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ರಾಜ್ಯ ನಾಯಕರಿಗೆ ಶೀಘ್ರವೇ ನಿಯೋಗ ಹೋಗಿ ದೂರು ನೀಡಲಿದ್ದೇವೆ. ಮತ್ತೊಮ್ಮೆ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ಮಾಡಿ, ಮುಂದಿನ ತಿಂಗಳ ನಂತರ ದೂರು ನೀಡುತ್ತೇವೆ
- - - -22ಕೆಡಿವಿಜಿ5:
ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಹೊನ್ನಾಳಿ ಅಧ್ಯಕ್ಷ ಜೆ.ಕೆ.ಸುರೇಶ, ಚನ್ನಗಿರಿ ಉಮೇಶಕುಮಾರ, ಕುಬೇರಪ್ಪ ಇತರರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.