ಕನ್ನಡಪ್ರಭ ವಾರ್ತೆ ಹಾಸನ
ಹೇಮಾವತಿ ನಗರದ ಕಾರ್ಮೆಲ್ ಚರ್ಚ್ ಬಳಿ ಇರುವ ಚರಂಡಿ ಒಳಗೆ ಈ ನವಜಾತ ಶಿಶುವನ್ನು ಒಂದು ಕವರ್ ಒಳಗೆ ಕಟ್ಟಿ ಬಿಸಾಡಿ ಹೋಗಿದ್ದಾರೆ. ಚರಂಡಿಯಲ್ಲಿ ಬಿದ್ದ ಮಗು ಕಂಡ ಜನರು ಮರುಕ ವ್ಯಕ್ತಪಡಿಸಿದರು. ಮಗುವಿನ ಶವವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಇದೇ ವೇಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.
ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಈ ಹೆಣ್ಣು ಮಗುವನ್ನು ನೋಡಲು ಸಾರ್ವಜನಿಕರು ನೂಕು ನುಗ್ಗಲಿನಲ್ಲಿ ಆಗಮಿಸಿದ್ದರು. ಇನ್ನು ಮಹಿಳೆಯರು ಈ ದೃಶ್ಯವನ್ನು ನೋಡಿ ಹಿಡಿ ಶಾಪ ಹಾಕುತ್ತಿದ್ದರು. ಯಾರೋ ಅಕ್ರಮವಾಗಿ ಪಡೆದ ಮಗುವನ್ನು ಬಿಸಾಡಿದ್ದಾರೆ. ಇಲ್ಲವೇ ಹೆಣ್ಣು ಮಗು ಹುಟ್ಟಿದೆ ಎಂದು ಸಾಕಾಲಾಗದೇ ಬಿಸಾಡಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದರು.