ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸ್ವಾಭಿಮಾನಿ ಬಳಗ ವತಿಯಿಂದ ಪಟ್ಟಣದ ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪ್ರೇರಣೋತ್ಸವ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ಹೊನ್ನಾಳಿ, ಮತ್ತು ನ್ಯಾಮತಿ ಅವಳಿ ತಾಲೂಕಿನ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಚಾಲನೆ ನೀಡಿ ಅವರು ಮಾತನಾಡಿದರು.
ಯಾರೂ ನಮಗೆ ವೇದಿಕೆ ಸೃಷ್ಠಿ ಮಾಡಿಕೊಡುವುದಿಲ್ಲ. ಆದರೆ, ತಮ್ಮ ಪ್ರತಿಭೆಯಿಂದ, ಶ್ರಮದಿಂದ ನಾವೇ ಉತ್ತಮ ವೇದಿಕೆ ಸೃಷ್ಟಿಕೊಂಡು ಜೀವನದಲ್ಲಿ ಅವಿಸ್ಮರಣೀಯ ಸಾಧನೆ ಮೂಲಕ ಉತ್ತಮ ಸಾಧಕರಾಗಿ ಹೊರಹೊಮ್ಮಬೇಕು. ಇದಕ್ಕಾಗಿ ನಿಮ್ಮ ಜೊತೆ ಸದಾ ಇನ್ ಸೈಟ್ಸ್ ಐಎಎಸ್, ತರಬೇತಿ ಸಂಸ್ಥೆ ಇರುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಎಸ್.ಎಸ್.ಎಲ್.ಸಿ., ಪಿಯುಸಿ ಆದ ಮೇಲೆ ಸೂಕ್ತವಾದ ಕೋರ್ಸ್ ಬಗ್ಗೆ ಸಮಗ್ರ ಮಾಹಿತಿ ಪಡೆದು ಸೇರಿ ಅಭ್ಯಾಸ ಮಾಡಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಎಲ್ಲರಲ್ಲಿಯೂ ಆತ್ಮಶಕ್ತಿ ಇದ್ದೇ ಇರುತ್ತದೆ. ಆದರೆ, ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಅತ್ಯಂತ ಪ್ರತಿಭಾಂತ ಬಡ ವಿದ್ಯಾರ್ಥಿಗಳಿಗೆ ತಮ್ಮ ಇನ್ ಸೈಟ್ಸ್ ಐಎಎಸ್ ಸಂಸ್ಥೆಯಲ್ಲಿ ಉಚಿತ ತರಬೇತಿ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಬಳಗದ ರಾಜು ಮೌರ್ಯ, ಶಿವಕುಮಾರ್ ಶೆಟ್ಟರ್,ಶಾಂತ್ ಕುಮಾರ್,ಶಿವಕುಮಾರ್ , ಸುದೀಪ್, ರೈತ ಮುಖಂಡ ಕಡದಕಟ್ಟೆ ಜಗದೀಶ್, ದೇವರಾಜ್, ರಾಜು ಕಣಗಣ್ಣಾರ, ಮಂಜುನಾಥ, ಪಂಕಜ ಅರುಣ್ ಕುಮಾರ್, ಹಳದಪ್ಪ ಪಿರಗಿ, ದಿಡಗೂರು ಫಾಲಾಕ್ಷಪ್ಪ, ವಿದ್ಯಾ, ವಿದ್ಯಾರ್ಥಿಗಳು, ಪೋಷಕರು ಇದ್ದರು. ಕಲಾವಿದ ಖಾಸಿಂ ಆಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.