ಕನ್ನಡಪ್ರಭ ವಾರ್ತೆ ಹೊಸನಗರ
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಲ ಪಡೆಯುವುದು ದೊಡ್ಡದಲ್ಲ, ಸಕಾಲದಲ್ಲಿ ಮರುಪಾವತಿ ಅತ್ಯಂತ ಕಠಿಣ ಸಾಧನೆ. ಇದು ಸಮರ್ಪಕವಾಗಿದ್ದಲ್ಲಿ ಹಣಕಾಸು ಸಂಸ್ಥೆ ಕೂಡ ಪೂರಕವಾಗಿ ಬೆಳೆಯಬಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಎನ್.ಆರ್. ದೇವಾನಂದ್ ಮಾತನಾಡಿ, ಹಳ್ಳಿಗಳಲ್ಲಿ ಮಹಿಳೆಯರಲ್ಲಿ ಆರ್ಥಿಕ ಜಾಗೃತಿ ಮೂಡಿದೆ. ಮಹಿಳೆ ಕುಟುಂಬದ ಲೆಕ್ಕ-ಪತ್ರ ನೋಡಿಕೊಂಡರೆ ಸಮಾಜದ ಆರ್ಥಿಕ ಪ್ರಗತಿ ಸಾಧ್ಯ ಎಂದರು.ಪತ್ರಕರ್ತೆ ಅಶ್ವಿನಿ ಪಂಡಿತ್ ಮಾತನಾಡಿ, ಮೊಬೈಲ್ ಸಂಪರ್ಕ ಸಾಧನ ಆಗಿರಲಿ. ಅದು ದಿನದ ಕೆಲಸವನ್ನು ಹಾಳುಮಾಡುವ ಮನರಂಜಗೆ ಸೀಮಿತ ಆಗದಿರಲಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಮೋಹನ್ ಶೆಟ್ಟಿ, ಶಶಿಕಲಾ, ಸಮನ್ವಯಾಧಿಕಾರಿ ಜಯಲಕ್ಷ್ಮೀ, ಸುಭಾಷ್ ಇದ್ದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.
- - - -8ಎಚ್ಒಎಸ್1ಪಿ: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು ತಹಸೀಲ್ದಾರ್ ರಶ್ಮಿ ಉದ್ಘಾಟಿಸಿದರು.