ಬ್ರಾಹ್ಮಣ ಸಮಾಜದ ಮುಂದಿನ ದಿನಗಳಲ್ಲಿ ಅನುದಾನ-ಮಾಜಿ ಸಚಿವ ಬಂಡಿ

KannadaprabhaNewsNetwork |  
Published : Mar 03, 2024, 01:34 AM IST
 ಗಜೇಂದ್ರಗಡ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ಮಾಜಿ ಸಚಿವ ಕಳಕಪ್ಪ ಬಂಡಿ ಅವರಿಗೆ ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಬ್ರಾಹ್ಮಣ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವುದಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಗಜೇಂದ್ರಗಡ: ಬ್ರಾಹ್ಮಣ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವುದಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಹಿರೇಬಜಾರದ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ನೂತನವಾಗಿ ನಿರ್ಮಿಸಿದ ಸಭಾಭವನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

''ಬ್ರಾಹ್ಮಣ ಸಮಾಜ ಸರ್ವೇಜನ ಸುಖೀನೋ ಭವಂತು'' ಎಂದು ಹೇಳುವ ಸಮಾಜ. ಅಂತಹ ಸಮಾಜದಿಂದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಪ್ರತಿಯೊಂದು ಜಾತಿಯಲ್ಲಿಯೂ ಬಡವರಿದ್ದಾರೆ. ಆದರೆ, ಬ್ರಾಹ್ಮಣ ಸಮುದಾಯದಲ್ಲಿರುವ ಬಡವರು ಅದನ್ನು ತೋರ್ಪಡಿಸದೇ ಇರುವುದರಲೇ ಸ್ವಾಭಿಮಾನ ಬದುಕು ನಡೆಸುತ್ತಿದ್ದು ಅವರ ಆರ್ಥಿಕ ಸ್ಥಿತಿಯನ್ನು ಸರ್ಕಾರ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು, ಕಾಯ್ದೆ ಸೌಲಭ್ಯಗಳ ವಿಚಾರದಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕಿದೆ ಎಂದರು.

ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದಲ್ಲಿ ರಘುನಾಥಭಟ್ಟ ತಾಸಿನ ಹಾಗೂ ಕೆ. ಸತ್ಯನಾರಾಯಣಭಟ್ಟ ಅವರಿಂದ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ಹಾಗೂ ರುಕ್ಮಿಣಿ ಪಾಂಡುರಂಗ, ಮಾರುತಿ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಸಮಾಜದಿಂದ ಮಹಾಪ್ರಸಾದ ನಡೆಯಿತು

ಈ ವೇಳೆ ವಿವಿಧ ಗಣ್ಯರಿಗೆ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ಸನ್ಮಾನಿಸಿದ ಬಳಿಕ ಮಾಜಿ ಸಚಿವರಿಗೆ ಸಮಾಜದಿಂದ ಮನವಿ ನೀಡಲಾಯಿತು.

ಸುಧಾಕರ ಕುಲಕರ್ಣಿ, ಕೃಷ್ಣಾಚಾರ್ಯ ಇಟಗಿ, ಅಶೋಕ ತಾಸಿನ, ಪ್ರಸಾದ ಕೆರಕಲಮಟ್ಟಿ ಸುರೇಶ ಪೂಜಾರ, ಕಲ್ಲಿನಾಥಶಾಸ್ತ್ರೀ ಜೀರೆ, ವಾಸು ಕುಲಕರ್ಣಿ, ಸಂಜೀವ ಜೋಶಿ, ಭದರಿನಾಥ ಜೋಶಿ, ಶ್ರೀನಿವಾಸ ತೈಲಂಗ್, ರವಿ ಕುಲಕರ್ಣಿ ಸಮಾಜದ ಮಹಿಳಾ ಮಂಡಲದ ಅಧ್ಯಕ್ಷೆ ಶಾರದಾ ತಾಸಿನ, ಶ್ರೀಮತಿ ಕುಲಕರ್ಣಿ, ರಾಧಾ ಇಟಗಿ, ಸಂಧ್ಯಾ ಕುಲಕರ್ಣಿ ಸೇರಿ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...