ಮೊಬೈಲ್ ಗೀಳಿನ ವ್ಯಸನದಿಂದ ಹೊರಬನ್ನಿ: ಬೇಗೂರು ಶಿವಪ್ಪ

KannadaprabhaNewsNetwork |  
Published : Apr 09, 2024, 12:54 AM IST
ಶಿಕಾರಿಪುರದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಬೇಸಿಗೆ ರಂಗಶಿಬಿರದಲ್ಲಿ ಈಸೂರು ಶಿವಪ್ಪನವರನ್ನು ಸನ್ಮಾನಿಸಲಾಯಿತು. ಹಿರಿಯ ಜನಪದ ಕಲಾವಿದ ಬೇಗೂರು ಶಿವಪ್ಪ, ಇಕ್ಬಾಲ್ ಅಹಮದ್, ಬಿ ಎಲ್ ರಾಜು ಇದ್ದರು. | Kannada Prabha

ಸಾರಾಂಶ

ಮಕ್ಕಳು ಮೊಬೈಲ್ ಗೀಳಿನ ವ್ಯಸನಕ್ಕೆ ದಾಸರಾಗುತ್ತಿದ್ದು ಇಂತಹ ಚಟದಿಂದ ಹೊರಬಂದು ಕಲೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕಾದ ಅಗತ್ಯತೆ ಇದೆ

ಶಿಕಾರಿಪುರ:

ಜನಪದ ಕಲೆಯು ಜನರ ದೈನಿಂದಿನ ಬದುಕಿನ ಅನುಭವವಾಗಿದ್ದು, ಜನಪದವು ಜನಸಾಮಾನ್ಯರ ಬದುಕಿನ ನಿತ್ಯ ಜೀವನದ ಕಥೆ ಸಾರುವ ಐತಿಹಾಸಿಕ ದಾಖಲೆಯಾಗಿದೆ ಎಂದು ಹಿರಿಯ ಜನಪದ ಕಲಾವಿದ ಬೇಗೂರು ಶಿವಪ್ಪ ಹೇಳಿದರು.

ಅವರು ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷದಲ್ಲಿ ಮಕ್ಕಳು ಮೊಬೈಲ್ ಗೀಳಿನ ವ್ಯಸನಕ್ಕೆ ದಾಸರಾಗುತ್ತಿದ್ದು ಇಂತಹ ಚಟದಿಂದ ಹೊರಬಂದು ಕಲೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕಾದ ಅಗತ್ಯತೆ ಇದೆ ಎಂದರು. ನಮ್ಮ ಹಿರಿಯರು ಮಕ್ಕಳಿಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಇಂದಿನ ತಾಯಂದಿರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿ ಗೊಂಬೆ ತೋರಿಸಿ ಊಟ ಮಾಡಿಸುವ ಪರಿಸ್ಥಿತಿ ಬಂದು ಒದಗಿದೆ ಎಂದು ವಿಷಾಧಿಸಿದರು. ಇದರಿಂದ ಮಕ್ಕಳ ಮನಸ್ಸು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಏಕಾಂಗಿಯಾಗುತ್ತದೆ. ಅದು ತೀರಾ ಅಪಾಯಕಾರಿ ಬೆಳವಣಿಗೆ. ಈ ದಿಸೆಯಲ್ಲಿ ರಂಗ ಶಿಬಿರ ಮಕ್ಕಳಿಗೆ ಕಲೆ ಸಂಸ್ಕೃತಿ ಕಿರುಪರಿಚಯ ನೀಡುವ ಬಹು ಮಹತ್ವದ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಹೆಸರಾಂತರ ರಂಗಕರ್ಮಿ, ಗುಡಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ರಂಗ ಶಿಬಿರದ ಈ ಪರಿಸರದಲ್ಲಿ ಮನ ಬಿಚ್ಚಿ ಸ್ನೇಹಿತರೊಂದಿಗೆ ಕಲೆ ಆಸ್ವಾದಿಸಬೇಕು ಮತ್ತು ಕಲಾಸಕ್ತಿ ಬೆಳೆಸಿಕೊಳ್ಳಬೇಕು. ನಿರ್ಮಲ ಮನಸ್ಸಿನಿಂದ ಮಕ್ಕಳು ಶಿಕ್ಷಣ ಕಲಿತಾಗ ಸ್ವತಂತ್ರವಾಗಿ ಬೆಳೆಯುತ್ತಾರೆ ಎಂದರು.

ತಾಲೂಕು ಕಾ.ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಎಲ್ ರಾಜು ಮಾತನಾಡಿದರು ವೇದಿಕೆಯಲ್ಲಿ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಕೆ ಎಸ್ ಹುಚ್ಚರಾಯಪ್ಪ ವ್ಯವಸ್ಥಾಪಕ ನಾಗರಾಜಪ್ಪ, ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಜ್ಯೋತಿ ಸಂಗಡಿಗರು ಪ್ರಾರ್ಥಿಸಿ, ಜಿಯಾವುಲ್ಲಾ ನಿರೂಪಿಸಿ, ಜಬಿ ವಂದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಜನಪದ ಕಲಾವಿದ ಈಸೂರು ಶಿವಪ್ಪನವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ