ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಾವೇರಿಯಲ್ಲಿ ಜೂನ್ 14ರಿಂದ ವಧು ವರರ ಅನ್ವೇಷಣಾ ಸಮಾವೇಶ

KannadaprabhaNewsNetwork | Published : Jun 11, 2025 12:06 PM

ಹೆಚ್ಚಿನ ಮಾಹಿತಿಗಾಗಿ ಮೊ. 9449425536/ 8217876335 ಇವರನ್ನು ಸಂಪರ್ಕಿಸಬಹುದು.

ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಶೇಷಾಚಲ ಸದ್ಗುರು ಆನಂದವನದಲ್ಲಿ ಜೂ. 14 ಹಾಗೂ 15ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ವಧು- ವರರ ಅನ್ವೇಷಣಾ ಸಮಾವೇಶ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ಮಂಗಳಸೂತ್ರ ಫೌಂಡೇಷನ್‌ನ ಸಂಚಾಲಕ ಶ್ರೀನಿವಾಸ ಭಾರದ್ವಾಜ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗಡಿ ಆನಂದವನದ ಶೇಷಾಚಲ ಸದ್ಗುರು ಸಂಸ್ಥಾನ, ಹೇಮಕುಶ ಚಾರಿಟೇಬಲ್ ಫೌಂಡೇಶನ್ ಹಾವೇರಿ, ವಿವಿಧ ಬ್ರಾಹ್ಮಣ ಸಂಘಟನೆಗಳು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾವೇರಿ, ಮಂಗಳಸೂತ್ರ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಶನ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಉಚಿತವಾಗಿ ಬ್ರಾಹ್ಮಣ ವಧು- ವರರ ಸಮಾವೇಶವನ್ನು ನಡೆಸಲಾಗುತ್ತಿದ್ದು, ಸಮಾಜದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ವಯಸ್ಸಾದರೂ ಮದುವೆಯಾಗುತ್ತಿಲ್ಲ ಎಂಬ ಕೊರಗನ್ನು ದೂರ ಮಾಡಿಸಲಿಕ್ಕೆ ಸಮಾವೇಶ ನಡೆಸಲಾಗುತ್ತಿದ್ದು, ಬ್ರಾಹ್ಮಣ ಸಮಾಜದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಸಮಾವೇಶದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ವಧು-ವರರ ಒಂದು ಪೋಸ್ಟ್‌ ಕಾರ್ಡ್ ಸೈಜ್ ಪೋಟೋ, 1 ಜಾತಕ, ಬಯೋಡೆಟಾವನ್ನು ತರಬೇಕು. ಜೂ. 12 ಹಾಗೂ 13ರಂದು ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9449425536/ 8217876335 ಇವರನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ, ಹೇಮಕುಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪವನ್ ಬಹದ್ದೂರ ದೇಸಾಯಿ, ಎಕೆಬಿಎಂಎಸ್‌ನ ರಾಜ್ಯಉಪಾಧ್ಯಕ್ಷ ಡಾ. ಸಂಜಯ ನಾಯಕ, ಎಕೆಬಿಎಂಎಸ್‌ನ ಜಿಲ್ಲಾ ಪ್ರತಿನಿಧಿ ದತ್ತಾತ್ರೇಯ ನಾಡಿಗೇರ, ಮಹಿಳಾ ಸಂಚಾಲಕಿ ದೀಪಾ ಪಾಟೀಲ, ರಮೇಶ ಕುಲಕರ್ಣಿ ಇತರರು ಇದ್ದರು.ವಿವಿಧ ಕಾಮಗಾರಿಗೆ ಶಾಸಕರ ಚಾಲನೆ

ಹಾನಗಲ್ಲ: ತಾಲೂಕಿನ ಹಿರೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ₹60 ಲಕ್ಷ ಅನುದಾನದಲ್ಲಿ ತಡಸ- ಗೊಂದಿ ರಸ್ತೆಯಿಂದ ಯಕ್ಕಂಬಿ-ಮೊಳಕಾಲ್ಮುರು ರಸ್ತೆ ವಾಯಾ ಹಿರೂರು ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ₹4 ಲಕ್ಷ ವೆಚ್ಚದಲ್ಲಿ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಶಿಲಾನ್ಯಾಸ ನೆರವೇರಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಜತೆಗೆ ಗ್ರಾಮೀಣಾಭಿವೃದ್ಧಿಗೂ ರಾಜ್ಯ ಸರ್ಕಾರ ಒತ್ತು ನೀಡಿದೆ. ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಅನುದಾನ ಲಭ್ಯತೆ ಗಮನಿಸಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.ಮುಖಂಡರಾದ ಈರಣ್ಣ ಬೈಲವಾಳ, ಪುಟ್ಟಪ್ಪ ಕಡಕೋಳ, ಗ್ರಾಪಂ ಸದಸ್ಯರಾದ ಮಕ್ಬೂಲ್ ಸರಖಾಜಿ, ಸಿದ್ದಪ್ಪ ಕೋಣನವರ, ನಿಂಗಪ್ಪ ಕ್ಷೌರದ, ಹನುಮಂತಪ್ಪ ಕ್ವಾಟೇರ, ಇಸ್ಮಾಯಿಲಸಾಬ ರುಸ್ತುಂಅಲಿ, ದಾದಾಪೀರ ಅಕ್ಕಿ, ಸಾದೀಕಅಹ್ಮದ ಶೇಷಗಿರಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.