ಮುಂಡರಗಿ: ಮುಂಡರಗಿ ಭೀಮರಾಯರು, ಹಮ್ಮಿಗಿ ಕೆಂಚನಗೌಡರು, ಡಂಬಳದ ವೆಂಕಟಾದ್ರಿ ದೇಸಾಯಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಪ್ರಾಣತ್ಯಾಗ ಮಾಡಿದ ಈ ನೆಲದ ಹೋರಾಟದ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಗೊತ್ತಾಗಬೇಕೆಂದರೆ ಪ್ರತಿ ವರ್ಷವೂ ಮುಂಡರಗಿ ಉತ್ಸವ ಅದ್ಧೂರಿಯಿಂದ ಆಚರಣೆಯಾಗುವಂತಾಗಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬೖಂದಾವನ ವೖತ್ತದಲ್ಲಿ ಸಾಂಕೇತಿಕವಾಗಿ ಆಚರಿಸಿದ ಮುಂಡರಗಿ ಉತ್ಸವದ ಅಂಗವಾಗಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡರಗಿ ಭೀಮರಾಯರು, ಹಮ್ಮಿಗಿ ಕೆಂಚನಗೌಡರು ಸೇರಿದಂತೆ ಅನೇಕರು ಕೊಪ್ಪಳ ಕೋಟೆಯಲ್ಲಿ ವೀರಮರಣವನ್ನಪ್ಪಿದ ನೆನಹಿಗಾಗಿ ಪ್ರತಿವರ್ಷ ಜೂನ್ 10ರಂದು ಈ ಮುಂಡರಗಿ ಉತ್ಸವವನ್ನು ಮಾಡಲಾಗುತ್ತಿದೆ. ನಮ್ಮ ನಾಡಿನ ಇತಿಹಾಸವನ್ನೇ ಅರಿಯದಿದ್ದರೆ ನಾವು ಹೊಸ ಇತಿಹಾಸ ಸೖಷ್ಟಿಸಲು ಸಾಧ್ಯವಾಗುವುದಿಲ್ಲ.2011ರಲ್ಲಿ ಈ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗಿತ್ತು. ನಂತರದಲ್ಲಿ ಒಂದಿಲ್ಲೊಂದು ವಿಘ್ನಗಳು ಬರುತ್ತಿರುವುದರಿಂದ ಮತ್ತೆ ಅದ್ಧೂರಿ ಆಚರಣೆ ನಡೆದಿಲ್ಲ. ಸಾಧ್ಯವಾದರೆ ಈ ವರ್ಷ ನವೆಂಬರ್ ವೇಳೆಗೆ ಅದ್ಧೂರಿ ಮುಂಡರಗಿ ಉತ್ಸವ ಮಾಡುವ ಮೂಲಕ ಯುವಕರಲ್ಲಿ ದೇಶಾಭಿಮಾನ, ಭಾಷಾಭಿಮಾನ ಬೆಳೆಸಲು ಯೋಚಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದ ವಿ.ಎಲ್. ನಾಡಗೌಡ್ರ ಧ್ವಜಾರೋಹಣ ನೆರವೇರಿಸಿದರು. ಜ. ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸ್ಥಾಯಿ ಕಮಿಟಿ ಅಧ್ಯಕ್ಷ ಮಹ್ಮದರಫೀಕ್ ಮುಲ್ಲಾ, ಸದಸ್ಯರಾದ ಪವನ್ ಮೇಟಿ, ರಾಜಾಭಕ್ಷಿ ಬೆಟಗೇರಿ, ಹಿರಿಯರಾದ ಈಶ್ವರಪ್ಪ ಹಂಚಿನಾಳ, ಬಸವರಾಜ ರಾಮೇನಹಳ್ಳಿ, ಎಸ್.ಎಸ್.ಗಡ್ಡದ, ಮಂಜುನಾಥ ಇಟಗಿ, ಡಿ.ಎಂ.ನಾಗರಹಳ್ಳಿ, ವೆಂಕಟೇಶ ಗುಗ್ಗರಿ, ಕೆ.ವಿ.ಹಿರೇಮಠ, ರುದ್ರಗೌಡ ಪಾಟಿಲ, ಬುಟ್ಟು ಹೊಸಮನಿ, ಪಾಲಾಕ್ಷಿ ಗಣದಿನ್ನಿ, ನಾಗರಾಜ ಹೊಸಮನಿ, ಭೀಮರಡ್ಡಿ ರಾಜೂರ, ಆನಂದ ರಾಮೇನಹಳ್ಳಿ, ವೀರಣ್ಣ ಹುಲ್ಲೂರ, ಅಡಿವೆಪ್ಪ ಛಲವಾದಿ, ರಾಮಣ್ಣ ಇಲ್ಲೂರ, ವೈ.ಎಚ್.ಬಚನಳ್ಳಿ, ಪ್ರಶಾಂತಗೌಡ ಪಾಟೀಲ, ಉಮೇಶ ಕೊರಡಕೇರಿ, ಗವಿಸಿದ್ದಯ್ಯ ಹಳ್ಳಿಕೇರಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯರಾದ ಶಂಬುಲಿಂಗ ಚಿಗರಿ, ಡಿ.ಸಿ.ಮಠ, ಹಾಗೂ ನೂತನ ಪ್ರಾ.ಡಾ.ಸಂತೋಷ ಹಿರೇಮಠ, ನಿವೃತ್ತ ಪೋಸ್ಟ್ ಮಾಸ್ಟರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.