ಸೇತುವೆ ಕಾಮಗಾರಿ ನನೆಗುದಿಗೆ ತಂತ್ರಜ್ಞಾನಕ್ಕೇ ಅವಮಾನ

KannadaprabhaNewsNetwork |  
Published : Dec 18, 2025, 04:00 AM IST
ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಡಾ.ರವಿ ಜಮಖಂಡಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಕನ್ನಡಪ್ರಭ, ಸುವರ್ಣನ್ಯೂಸ್ ಎಮಿನೆಂಟ್ ಎಜಿನಿಯರ್ ಪ್ರಶಸ್ತಿ ಪುರಸ್ಕೃತ ಅಭಿಯಂತರ ಸುರೇಶ ಪಟ್ಟಣಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಒಂದು ದಶಕಳಿಂದ ಸ್ಥಗಿತಗೊಂಡ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬವಾಗಿರುವುದು ಕೃಷ್ಣಾ ನದಿಯಲ್ಲಿನ ನೀರಿನ ಕಾರಣದಿಂದ ಎಂದರೆ ತಂತ್ರಜ್ಞಾನವೇ ನಗೆಪಾಟಲಿಗೆ ಗುರಿಯಾಗುತ್ತದೆಂದು ಹಿರಿಯ ಅಭಿಯಂತರ, ಕನ್ನಡಪ್ರಭ, ಸುವರ್ಣನ್ಯೂಸ್ ಎಮಿನೆಂಟ್ತೆಂಜಿನಿಯರ್‌ ಪ್ರಶಸ್ತಿ ಪುರಸ್ಕೃತ ಸುರೇಶ ಪಟ್ಟಣಶೆಟ್ಟಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಒಂದು ದಶಕಳಿಂದ ಸ್ಥಗಿತಗೊಂಡ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬವಾಗಿರುವುದು ಕೃಷ್ಣಾ ನದಿಯಲ್ಲಿನ ನೀರಿನ ಕಾರಣದಿಂದ ಎಂದರೆ ತಂತ್ರಜ್ಞಾನವೇ ನಗೆಪಾಟಲಿಗೆ ಗುರಿಯಾಗುತ್ತದೆಂದು ಹಿರಿಯ ಅಭಿಯಂತರ, ಕನ್ನಡಪ್ರಭ, ಸುವರ್ಣನ್ಯೂಸ್ ಎಮಿನೆಂಟ್ತೆಂಜಿನಿಯರ್‌ ಪ್ರಶಸ್ತಿ ಪುರಸ್ಕೃತ ಸುರೇಶ ಪಟ್ಟಣಶೆಟ್ಟಿ ಲೇವಡಿ ಮಾಡಿದರು.

ರಬಕವಿ-ಮಹಿಷವಾಡಗಿ ಸೇತುವೆ ಪೂರ್ಣಗೊಳಿಸಲು ಆಗ್ರಹಿಸಿ ಡಾ.ರವಿ ಜಮಖಂಡಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿ, ಇಂದು ವಾಸ್ತುಶಾಸ್ತ್ರ ಮತ್ತು ಕಾಮಗಾರಿ ನಡೆಸುವ ಪರಿ ಉನ್ನತ ತಂತ್ರಜ್ಞಾನದ ಪರಾಕಾಷ್ಠೆ ತಲುಪಿದೆ. ಎಂತಹುದೇ ಜಟಿಲ ಸ್ಥಿತಿಯಲ್ಲೂ ಕಾಮಗಾರಿ ನಡೆಸುವ ಕೌಶಲ್ಯತೆ ಭಾರತೀಯ ಅಭಿಯಂತರರಿಗಿದೆ. ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಸ್ಥಳೀಯ ಅಭಿಯಂತರ ಸಂಘದ ಸದಸ್ಯರೆಲ್ಲರೂ ಸರ್ಕಾರ ನೀಡಿರುವ ಅನುದಾನ ಮರಳಿ ಪಡೆದು ನಮಗೆ ನೀಡಿದಲ್ಲಿ ನಿಗದಿತ ಕಾಲದಲ್ಲಿ ಪೂರ್ಣಗೊಳಿಸುತ್ತೇವೆಂದು ಸವಾಲು ಹಾಕಿದರು. ಸರ್ಕಾರದ ಇಚ್ಛಾಶಕ್ತಿಯ ಮುಂದೆ ಯಾವ ತಂತ್ರ-ಕುತಂತ್ರಗಳಿಗೂ ಮಣೆ ಹಾಕದೇ ಅಡ್ಡಿಯಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಾಮಗಾರಿಗೆ ಹಸಿರು ನಿಶಾನೆ ತೋರಿಸಬೇಕೆಂದು ಆಗ್ರಹಿಸಿದರು.ಹೋರಾಟಕ್ಕೆ ಬೆಂಬಲಿಸಿ ರಬಕವಿ-ಬನಹಟ್ಟಿ, ತೇರದಾಳ ಅಭಿಯಂತರರ ಸಂಘದ ಬಸವರಾಜ ನುಚ್ಚಿ, ಕಲ್ಮೇಶ ಮಾಳಿ, ಸುನೀಲ ಹುಲಗಬಾಳಿ, ವಿನೋದ ಮಾಲಾಪುರ, ರಘು ಕುಲಗೋಡ, ಸುಧಾಕರ ಅಮ್ಮಣಗಿಮಠ, ಪವನ ಪತ್ತಾರ, ಸಂಜಯ ತೆಗ್ಗಿ, ರಾಜೀವ ಸಾಬೋಜಿ, ಶಿವಾನಂದ ಮಠದ, ಶಿವಾನಂದ ಗಿಡವೀರ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ