ವಿಜೃಂಭಣೆಯಿಂದ ನಡೆದ ಬೃಂದಾವನೋತ್ಸವ ಮೆರವಣಿಗೆ

KannadaprabhaNewsNetwork |  
Published : Nov 04, 2025, 12:15 AM IST
3ಕೆಎಂಎನ್ ಡಿ23,24 | Kannada Prabha

ಸಾರಾಂಶ

ಪ್ರಸಿದ್ಧ ಶ್ರೀರಂಗನಾಥ ದೇವಾಲಯ, ಶ್ರೀಲಕ್ಷ್ಮಿ ನರಸಿಂಹ ಹಾಗೂ ಶ್ರೀಕೋದಂಡ ರಾಮ ದೇವರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಬೃಂದಾವನ ನಂತರ ಈಶ್ವರ, ಲಕ್ಷ್ಮಿದೇವಿ, ಸುಬ್ರಮಣ್ಯಸ್ವಾಮಿ, ಜ್ಯೋತಿರ್ ಮಹೇಶ್ವರ ಸ್ವಾಮಿ ಹಾಗೂ ಆಂಜನೇಯ ಸೇರಿದಂತೆ ಒಟ್ಟು 9 ದೇವರುಗಳ ಉತ್ಸವದ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ತುಳಿಸಿ ಪೂಜೆಯಂದು ವಿವಿಧ ದೇವಾಲಯಗಳಲ್ಲಿ ಬೃಂದಾವನೋತ್ಸವ ಮೆರವಣಿಗೆ ಬಹಳ ವಿಜೃಂಭಣೆಯಿಂದ ಪಟ್ಟಣದಲ್ಲಿ ಜರುಗಿತು.

ಪ್ರಸಿದ್ಧ ಶ್ರೀರಂಗನಾಥ ದೇವಾಲಯ, ಶ್ರೀಲಕ್ಷ್ಮಿ ನರಸಿಂಹ ಹಾಗೂ ಶ್ರೀಕೋದಂಡ ರಾಮ ದೇವರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಬೃಂದಾವನ ನಂತರ ಈಶ್ವರ, ಲಕ್ಷ್ಮಿದೇವಿ, ಸುಬ್ರಮಣ್ಯಸ್ವಾಮಿ, ಜ್ಯೋತಿರ್ ಮಹೇಶ್ವರ ಸ್ವಾಮಿ ಹಾಗೂ ಆಂಜನೇಯ ಸೇರಿದಂತೆ ಒಟ್ಟು 9 ದೇವರುಗಳ ಉತ್ಸವದ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಜರುಗಿತು.

ವಿಶೇಷತೆಯೊಂದಿಗೆ ರಥದಲ್ಲಿ ದೇವರುಗಳ ಮೂರ್ತಿ ಪ್ರತಿಸ್ಥಾಪಿಸಿ ವಿವಿಧ ರೀತಿಯ ಹೂಗಳಿಂದ ಬೃಂದಾವನಾಕಾರದಲ್ಲಿ ಕಟ್ಟಿ ಅದಕ್ಕೆ ಅಲಂಕರಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಿ ನೋಡುವ ಭಕ್ತರ ಕಣ್ಮನ ಸೆಳೆಯುವಂತೆ ಮಾಡಲಾಗಿತ್ತು.

ಕಾರ್ತಿಕ ಮಾಸದ ಸೋಮವಾರದ ತುಳಸಿ ಪೂಜೆಯಂದು ಒಂದೇ ದಿನದಲ್ಲಿ 9 ದೇವರುಗಳ ಮೂರ್ತಿಗಳ ಪ್ರತಿಸ್ಥಾಪಿಸಿ ಉತ್ಸವ ನಡೆಯುವುದು, ಮಂಗಳವಾದ್ಯದೊಂದಿಗೆ ಮನೆ ಬಾಗಿಲಿಗೆ ಬಂದ ಬೃಂದಾವನ ದೇವರುಗಳಿಗೆ ಹಣ್ಣು ಕಾಯಿ ಹೊಡೆದು ಆರತಿ ಪ್ರಸಾದ ವಿತರಣೆ ನಡೆಯಿತು.

ಪ್ರತಿ ದೇವಾಲಯದ ಅರ್ಚಕರು ಆಯಾ ದೇವರ ಮೂರ್ತಿಗಳಿಗೆ ರಸ್ತೆ ಉದ್ದಕ್ಕೂ ಪೂಜೆ ನಡೆಸಿ ನಂತರ ಆಯಾ ದೇವಾಲಯದಲ್ಲಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಉತ್ಸವ ಮೂರ್ತಿಗಳ ನೋಡಲು ಪಟ್ಟಣವಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದ ಜನರು ಆಗಮಿಸಿ ಭಕ್ತಿ ಭಾವ ಮೆರೆದರು.

ವಿದೇಶಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ: ಆಲಂಗೂರು ಮಂಜುನಾಥ್

ಕನ್ನಡಪ್ರಭ ವಾರ್ತೆ ಹಲಗೂರು

ರಾಜ್ಯದಲ್ಲಿ ಮಾತ್ರವಲ್ಲ. ವಿದೇಶಗಳಲ್ಲಿಯೂ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಅಭಿಮಾನ ಮೆರೆಯುತ್ತಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಮಾತನಾಡಿದರು.

ಕನ್ನಡಿಗರು ನಮ್ಮ ನಾಡು-ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಂಡು ಹೆಚ್ಚು ವಾಸ ಮಾಡುತ್ತಿದ್ದಾರೆ. ಅಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ನಮಸ್ಕರಿಸುವ ಪರಿಪಾಠವನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಸಮಾಜ ವಿಭಾಗ ಮುಖ್ಯಸ್ಥರಾದ ಸುಧಾಬಿದರಿ ಮಾತನಾಡಿ, ನಾವೆಲ್ಲರೂ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಂಕಣ ಬದ್ಧರಾದರೆ ಮಾತ್ರ ನಮ್ಮ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು.

ಈ ವೇಳೆ ಕನ್ನಡ ಉಪನ್ಯಾಸಕರಾದ ಮೂರ್ತಿ, ಇತಿಹಾಸ ವಿಭಾಗದ ರವಿ, ದೈಹಿಕ ಶಿಕ್ಷಣ ನಿರ್ದಶಕರಾದ ಡಾ. ಶ್ರೀನಿವಾಸ್ ಮಾತನಾಡಿದರು. ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ